-->


ದೇವಸ್ಥಾನದ ಜೀರ್ಣೋದ್ಧಾರದ ಕಾರ್ಯ  ಹಾಗೂ ಬ್ರಹ್ಮಕಲಶೋತ್ಸವದ ಪ್ರಯುಕ್ತ ಸಮಾಲೋಚನೆ ಸಭೆ

ದೇವಸ್ಥಾನದ ಜೀರ್ಣೋದ್ಧಾರದ ಕಾರ್ಯ ಹಾಗೂ ಬ್ರಹ್ಮಕಲಶೋತ್ಸವದ ಪ್ರಯುಕ್ತ ಸಮಾಲೋಚನೆ ಸಭೆ

ಕಿನ್ನಿಗೋಳಿ:ಶ್ರೀ ಮೂಕಾಂಬಿಕಾ ದೇವಸ್ಥಾನ ಶಾಂತಿನಗರ ತಾಳಿಪಾಡಿ ಗುತ್ತಕಾಡು ಕಿನ್ನಿಗೋಳಿ ಇಲ್ಲಿ ಮಾರ್ಚ್ 10,11,12 ರಂದು ಬ್ರಹ್ಮಕಲಶೋತ್ಸವ ನಡೆಯಲಿದ್ದು, ದೇವಸ್ಥಾನದ ಜೀರ್ಣೋದ್ಧಾರದ ಕಾರ್ಯ  ಹಾಗೂ ಬ್ರಹ್ಮಕಲಶೋತ್ಸವದ ಪ್ರಯುಕ್ತ ಸಮಾಲೋಚನೆ ಸಭೆಯು  ಇಂದು ದೇವಸ್ಥಾನದ ಆವರಣದಲ್ಲಿ ನಡೆಯಿತು.

 ಶ್ರೀ ಮೂಕಾಂಬಿಕಾ ದೇವಸ್ಥಾನ ಶಾಂತಿನಗರ ಇದರ ಅಧ್ಯಕ್ಷ ಚಂದ್ರಶೇಖರ  ಅವರು ಸಭೆಯ ಅಧ್ಯಕ್ಷತೆಯನ್ನು  ವಹಿಸಿದ್ದರು.
ಸಭೆಯಲ್ಲಿ ದಿನೇಶ್ ಬಂಡ್ರಿಯಾಲ್ ತಾಳಿಪಾಡಿ ಗುತ್ತು, ಶ್ರೀ ಮೂಕಾಂಬಿಕಾ ದೇವಸ್ಥಾನ ಶಾಂತಿನಗರದ  ಧರ್ಮದರ್ಶಿ ವಿವೇಕಾನಂದ,  ಪಡ್ಯಾಕ್ಯಾರ್ ಮಾರಿಗುಡಿಯ ಅಧ್ಯಕ್ಷ ಸುರೇಶ್ ಶೆಟ್ಟಿ ನಡಿಯಾಲ್,ಕಿನ್ನಿಗೋಳಿ ಯುಗಪುರುಷದ   ಭುವನಾಭಿರಾಮ ಉಡುಪ, ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನ ತಾಳಿಪಾಡಿ ಮಠದ ಅಧ್ಯಕ್ಷ ದಯಾನಂದ ಭಟ್ , ಬ್ರಹ್ಮ ಶ್ರೀ ನಾರಾಯಣ ಗುರು ಸಂಘ ತಾಳಿಪಾಡಿಯ ಅಧ್ಯಕ್ಷ ಕುಶಲ ಪೂಜಾರಿ ,ಪಕ್ಷಿಕೆರೆ ಸಾಗರಿಕದ ಧನಂಜಯ ಶೆಟ್ಟಿಗಾರ್, ರೋಕಿ ಪಿಂಟೋ, ದಿನೇಶ್ ಆಚಾರ್, ರಘುರಾಮ ಪುನರೂರು,ಡೋಲ್ಪಿ ಸಂತುಮಯಾರ್, ಶಾಂಭವಿ ಶೆಟ್ಟಿ,ಮಾಧವ,ಚಿತ್ರಾಕ್ಷಿ ಶೆಟ್ಟಿ,  ಮೀರಾ ಶೆಟ್ಟಿ, ಸುಕುಮಾರ್ ಶೆಟ್ಟಿ,ವಿಠಲ ಪೂಜಾರಿ ಬೆದ್ರಡಿ, ದಿವಾಕರ ಕರ್ಕೇರಾ, ಯೋಗೀಶ್ ಕೋಟ್ಯಾನ್, ಕೇಶವ, ಶಶಿಕಾಂತ್ ಹಾಗೂ ಸಮಿತಿಯ ಪದಾಧಿಕಾರಿಗಳು ಹಾಗೂ ಭಕ್ತಾದಿಗಳು  ಉಪಸ್ಥಿತರಿದ್ದರು.
ದಿವಾಕರ ಕರ್ಕೇರಾ ಕಾರ್ಯಕ್ರಮ ನಿರೂಪಿಸಿದರು. ಶಶಿಕಾಂತ್ ಸ್ವಾಗತಿಸಿ ಧನ್ಯವಾದ ವಿತ್ತರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

Advertise under the article