ಕಿನ್ನಿಗೋಳಿಯ ಜೆ.ಬಿ ಫ್ರೆಂಡ್ಸ್ ನ ಆಶ್ರಯದಲ್ಲಿ ಶ್ರಮದಾನ
Thursday, June 8, 2023
ಕಿನ್ನಿಗೋಳಿ: ಕಿನ್ನಿಗೋಳಿ ಯಿಂದ ಗೋಳಿಜೋರ ಕ್ಕೆ ಸಾಗುವಂತಹ ಕಾಂಕ್ರಿಟ್ ರಸ್ತೆಯ ಅಲ್ಲಲ್ಲಿ ಬಿರುಕು ಉಂಟಾಗಿದ್ದು, ಬಿರುಕುನಿಂದಾಗಿ ರಸ್ತೆಯಲ್ಲಿ ದಿನಂಪ್ರತಿ ಸಂಚರಿಸುವಂತಹ ವಾಹನ ಸವಾರರಿಗೆ ಸಮಸ್ಯೆಯಾಗಿತ್ತು.ಅಲ್ಲದೆ ಕಾಂಕ್ರಿಟ್ ರಸ್ತೆಯಲ್ಲಿನ ಬಿರುಕಿನಿಂದಾಗಿ ಬೈಕ್ ಸವಾರರೊಬ್ಬರು ಬಿದ್ದು ಗಾಯಗೊಂಡ ಘಟನೆಯು ನಡೆದಿತ್ತು.ಸಮಸ್ಯೆಯನ್ನು ಅರಿತ ಕಿನ್ನಿಗೋಳಿಯು ಜೆ.ಬಿ ಫ್ರೆಂಡ್ಸ್ ನ ಸರ್ವಸದಸ್ಯರುಗಳು ಸೇರಿ ಬಿರುಕು ಬಿಟ್ಟ ಕಾಂಕ್ರಿಟ್ ರಸ್ತೆಯ ಅಲ್ಲಲ್ಲಿ ಡಾಂಬರಿನಿಂದ ಪ್ಯಾಚ್ ವರ್ಕ್ ಮಾಡಿದರು. ಜೆ.ಬಿ ಫ್ತೆಂಡ್ಸ್ ನ ಗೌರವಾಧ್ಯಕ್ಷ ವಿನ್ಸೆಂಟ್ ಡಿಕೋಸ್ಟ, ಅಧ್ಯಕ್ಷ ಸಂತೋಷ್ ಶೆಟ್ಟಿ ಪುನರೂರು.. ಕಾರ್ಯದರ್ಶಿ ನಿಶಾನ್ ಕ್ವಾಡ್ರಸ್,ಸದಸ್ಯರಾದ ಗೋಪಾಲ್ ಜೋಡ್ಬೈಲ್, ಮನಿಷ್ ಕುಲಾಲ್, ರಾನ್ಸನ್,ರೋಲ್ಪಿ,ಗೌತಮ್,ಉದಯಕುಮಾರ್,ನವಾಜ್ ಹಾಗೂ ಮತ್ತಿತರರು ಪಾಲ್ಗೊಂಡಿದ್ದರು.