ಆಕರ್ಷಕ ಸಿರಿ ತುಪ್ಪೆಯ ರಚನೆ
ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕುಂಭಾಭಿಷೇಕ ಹಾಗೂ ನಾಗಮಂಡಲೋತ್ಸವದ ಅಂಗವಾಗಿ ರಮೇಶ್ ದೇವಾಡಿಗ ಪಾವಂಜೆ ಹಾಗೂ ಶೇಖರ್ ದೇವಾಡಿಗ ಪಾವಂಜೆ ಯವರ ಉಸ್ತುವಾರಿಯಲ್ಲಿ ಊರ ಗ್ರಾಮಸ್ಥರು ಹಾಗೂ ಸ್ವಯಂ ಸೇವಕರನ್ನು ಒಳಗೊಂಡು ಉಗ್ರಾಣದಲ್ಲಿ ಸುಮಾರು ನಾಲ್ಕು ಗಂಟೆಗಳ ಕಾಲ ಶ್ರಮವಹಿಸಿ ಆಕರ್ಷಕ ಸಿರಿ ತುಪ್ಪೆಯನ್ನು ರಚನೆ ಮಾಡಿದ್ದು, ಇದಕ್ಕೆ 800 ಸೂಡಿ ಬೈಹುಲ್ಲು, 70 ಮುಡಿ ಭತ್ತ ಹಾಗೂ ರಂಪೋನಿ (ಅಲಾದ್) ಹಗ್ಗವನ್ನು ಬಳಸಲಾಗಿದೆ.