ರೋಟರಿ ಕ್ಲಬ್ ಮಣಿಪಾಲ ಹಿಲ್ಸ್ ನ ವತಿಯಿಂದ ಮುದ್ದು ಕೃಷ್ಣ ಸ್ಪರ್ಧೆ
Friday, September 12, 2025
ಉಡುಪಿ:ರೋಟರಿ ಕ್ಲಬ್ ಮಣಿಪಾಲ ಹಿಲ್ಸ್ ನ ವತಿಯಿಂದ ಸೆ. 8 ರಂದು ರೋಟರಿ ಸಭಾಂಗಣ ಮಣ್ಣಪಳ್ಳ ದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಕ್ಲಬ್ ಗೆ ಸೇರಿರುವ 6 ಸಮುದಾಯ ದಳಗಳಾದ ಆದರ್ಶ ನಗರ, ಪ್ರಗತಿ ನಗರ, ಬ್ರಾಮರಿ, ನೇತಾಜಿ ನಗರ, ಮಂಚಿಕೋಡಿ, ಧೂಮವತಿ ಸಮುದಾಯದಳದ ಸದಸ್ಯರ 1 ರಿಂದ 6 ವರ್ಷದ ಮಕ್ಕಳಿಗಾಗಿ ಮುದ್ದು ಕೃಷ್ಣ ಸ್ಪರ್ಧೆ ಆಯೋಜಿಸಲಾಗಿತ್ತು. ಸಮುದಾಯದಳಕ್ಕೆ ಸೇರಿದ್ದ 6 ಅಂಗನವಾಡಿ ಶಿಕ್ಷಕಿಯರು ಮತ್ತು ರೋಟರಿ ಕ್ಲಬ್ ನ ಇಬ್ಬರು ಶಿಕ್ಷಕರನ್ನು ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಸನ್ಮಾನಿಸಲಾಯಿತು.
ಕಾರ್ಯಕ್ರಮವನ್ನು ರೋ. ವಲಯ ಸೇನಾನಿ ಜನಾರ್ಧನ್ ಭಟ್ ಉದ್ಘಾಟಿಸಿದರು.
ಶ್ರೀಮತಿ ಜ್ಯೋತಿ ಸರ್ವೋದೆಯವರು ಬಹುಮಾನ ವಿತರಿಸಿದರು.
ರೋಟರಿ ಕ್ಲಬ್ ಮಣಿಪಾಲ ಹಿಲ್ಸ್ ನ ಅಧ್ಯಕ್ಷ ರೋ. ಸುರೇಶ ರೈ ಸ್ವಾಗತಿಸಿದರು. ಕ್ಲಬ್ ನ ಕಾರ್ಯದರ್ಶಿ ರೋ. ಶ್ರೀಲತಾ ಮೈಯ ನಿರೂಪಿಸಿದರು. ಪ್ರಾರ್ಥನೆಯನ್ನು ರೋ. ಗೀತಾ ಸುರೇಶ ರೈ, ರೋ. ಶ್ರೀಲತಾ ಮೈಯ ಹಾಗೂ ರೋ. ಜಾಹ್ನವಿ ಬಂಗೇರ ನಡೆಸಿಕೊಟ್ಟರು.
ಈ ಸಂದರ್ಭ ಸಮುದಾಯದಳದ ಸದಸ್ಯರಿಂದ ನೃತ್ಯ ಪ್ರದರ್ಶನ ನಡೆಯಿತು.