Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಜ್ಪೆ ನಾಗರೀಕರ ಹಿತರಕ್ಷಣಾ ವೇದಿಕೆಯಿಂದ ಸಚಿವರಿಗೆ ಮನವಿ

ಬಜಪೆ:ಬಜ್ಪೆ ಚತುಷ್ಪಥ ರಸ್ತೆಯ ಉಳಿದ ಕಾಮಗಾರಿ ಪೂರ್ಣಗೊಳಿಸಿ,ಬಜ್ಪೆ ಈದ್ಗಾ ಮಸೀದಿಯ ದಫನ ಭೂಮಿ ಬಳಿ ಮುಖ್ಯ ಹೆದ್ದಾರಿಗೆ ಶಾಶ್ವತ ತಡೆಗೋಡೆ ನಿರ್ಮಿಸಿ ,ಲೋಕೋಪಯೋಗಿ  ಕಾಮಗಾರಿ ಯಲ್ಲಿ ಆಗುವ ಕಳಪೆ ಕಾಮಗಾರಿಗೆ ಸಹಾಯ ಮಾಡುವ ಅಧಿಕಾರಿಯನ್ನು ಕೂಡಲೇ ವರ್ಗಾಹಿಸಿ  ಮುಂತಾದ ಬೇಡಿಕೆಗಳನ್ನು ಈಡೇರಿಸಿ ಎಂದು ಆಗ್ರಹಿಸಿ ಬಜಪೆಯ ನಾಗರಿಕರ ಹಿತರಕ್ಷಣಾ ವೇದಿಕೆಯಿಂದ ಲೋಕೋಪಯೋಗಿ ಸಚಿವರಾದ ಸತೀಶ್  ಜಾರಕಿ ಹೋಳಿ ಯವರಿಗೆ ಮನವಿಯನ್ನು ನೀಡಿದರು. ಈ ಸಂದರ್ಭದಲ್ಲಿ ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆ ಸಂಚಾಲಕ ಸಿರಾಜ್ ಬಜ್ಪೆ ,ಮಹಿಳಾ ನಾಯಕಿ  ವಿಜಯ  ಗೋಪಾಲ ಸುವರ್ಣ ,ಮುಲ್ಕಿ ಮೂಡಬಿದ್ರೆ ಐಟಿ ಸೆಲ್ ಅಧ್ಯಕ್ಷ 
ನಿಸಾರ್ ಕರಾವಳಿ ,ಕುಡುಬಿ ಸಮಾಜದ ನಾಯಕ  ಶೇಖರ್ ಗೌಡ ,ವೇದಿಕೆಯ ಹಿರಿಯರಾದ ಮೊನಕ ಹಾಜಿ,ಅನ್ವರ ರಾಝಕ್   ಹಾಗೂ ಮತ್ತಿತರರು ಇದ್ದರು.