ಮೂಲ್ಕಿ ತಾಲೂಕು ಸಮ್ಮೇಳನ ವಿದ್ಯಾರ್ಥಿಗಳಿಗೆ ಸಾಹಿತ್ಯ ಸ್ಪರ್ಧೆ
Saturday, January 11, 2025
ಮೂಲ್ಕಿ : ಮೂಲ್ಕಿ ತಾಲೂಕು ೨ನೆಯ ಕನ್ನಡ ಸಾಹಿತ್ಯ ಸಮ್ಮೇಳನವು ಫೆಬ್ರವರಿ ೮ರ ಶನಿವಾರ ಐಕಳ ಪೊಂಪೈ ಕಾಲೇಜಿನಲ್ಲಿ ನಡೆಯಲಿದೆ. ಖ್ಯಾತ ಸಾಹಿತಿ ಶ್ರೀಧರ ಡಿ.ಎಸ್. ಇವರ ಅಧ್ಯಕ್ಷತೆಯಲ್ಲಿ ವಿವಿಧ ಸಾಹಿತಿಗಳ ಉಪಸ್ಥಿತಿಯಲ್ಲಿ ವಿಚಾರಗೋಷ್ಟಿ ಚಿಂತನ- ಮಂಥನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಈ ಸಮ್ಮೇಳನದ ಸಲುವಾಗಿ ಮೂಲ್ಕಿ ತಾಲೂಕಿನ ಪ್ರೌಢಶಾಲೆ, ಪದವೀಪೂರ್ವ ಕಾಲೇಜು ಹಾಗೂ ಪದವಿ ಕಾಲೇಜು ಹೀಗೆ ಮೂರು ವಿಭಾಗಗಳಲ್ಲಿ ವಿದ್ಯಾರ್ಥಿಗಳಿಗೆ ’ನಾನು ಓದಿದ ಒಳ್ಳೆಯ ಪುಸ್ತಕ’ ಈ ವಿಚಾರವಾಗಿ ಎ೪ ಅಳತೆಯ ಎರಡು ಪುಟ ಮೀರದ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ವಿದ್ಯಾರ್ಥಿಗಳು ತಾವು ಓದಿದ ಯಾವುದೇ ಸಾಹಿತ್ಯ ಪ್ರಕಾರದ ಪುಸ್ತಕದ ಕುರಿತಾಗಿ ಬರೆದು ಕಳುಹಿಸಬಹುದು. ಪ್ರತಿ ವಿಭಾಗದಲ್ಲಿ ಉತ್ತಮವಾದ ೨ ಬರಹಗಳಿಗೆ ಬಹುಮಾನ ನೀಡಲಾಗುವುದು. ವಿದ್ಯಾರ್ಥಿ ತನ್ನ ಹೆಸರು, ಶಾಲೆ, ತರಗತಿ, ದೂರವಾಣಿ ಸಂಖ್ಯೆಯೊಂದಿಗೆ ಪ್ರಬಂಧವನ್ನು ಜನಾರ್ದನ್, ಪೊಂಪೈ ಪಿಯು ಕಾಲೇಜು, ಐಕಳ, ಮೂಲ್ಕಿ ತಾಲೂಕು-೫೭೪೧೪೧, ದೂರವಾಣಿ ೭೩೫೩೯೬೮೭೮೭ ಈ ವಿಳಾಸಕ್ಕೆ ೩೧-೧-೨೦೨೫ರ ಶುಕ್ರವಾರದ ಒಳಗಡೆ ತಲುಪಿಸಬೇಕು ಎಂದು ಕಸಾಪ ಮೂಲ್ಕಿ ಘಟಕಾಧ್ಯಕ್ಷ ಮಿಥುನ ಕೊಡೆತ್ತೂರು ತಿಳಿಸಿದ್ದಾರೆ.