ಏಳಿಂಜೆ:30 ಲಕ್ಷ ರೂ ವೆಚ್ಚದಲ್ಲಿ ದೈವಸ್ಥಾನ ನವೀಕರಣ,ಮನವಿ ಪತ್ರ ಬಿಡುಗಡೆ
ಏಳಿಂಜೆ:ಆದಿ ಜಾರಂದಾಯ ಬಂಟ ದೈವಸ್ಥಾನ ಏಳಿoಜೆಯಲ್ಲಿ ಜನವರಿ 14 ಹಾಗೂ 15 ರಂದು ಪ್ರತಿಷ್ಠೆ ಮತ್ತು ಕುಂಭಾಭಿಷೇಕವು ನಡೆಯಲಿದ್ದು,ದೈವಸ್ಥಾನವು ಸುಮಾರು 30 ಲಕ್ಷ ರೂ ವೆಚ್ಚದಲ್ಲಿ ನವೀಕರಣ ಗೊಳ್ಳಲಿದೆ. ದೈವಸ್ಥಾನದಲ್ಲಿ ಈ ಬಗ್ಗೆ ಮನವಿ ಪತ್ರದ ಬಿಡುಗಡೆಯ ಮಾಡಲಾಯಿತು. ಈ ಸಂದರ್ಭ ಗಣೇಶ್ ಭಟ್, ಆಡಳಿತ ಮೊಕ್ತೇಸರ ಸದಾನಂದ್ ಎಂ ಶೆಟ್ಟಿ, ವಸಂತ ಶೆಟ್ಟಿ ತಾವಡೆ, ಭಾಸ್ಕರ್ ಶೆಟ್ಟಿ ಬಂಕೇಡ ಬಾವ, ಗುತ್ತಿನಾ ರ್ ಬಾಲಕೃಷ್ಣ ಶೆಟ್ಟಿ ಅಂಗಡಿ ಗುತ್ತು, ಬಾಲಕೃಷ್ಣ ಶೆಟ್ಟಿ ಕೊಂಜಲು ಗುತ್ತು, ಪೊವಪ್ಪ ಮೂಲ್ಯ, ಪೊವನ ಪೂಜಾರಿ ಭಂಡಾರದ ಮನೆ, ನವಚೇತನ ಯುವಕ ಮಂಡಲದ ಅಧ್ಯಕ್ಷ ಸುದೀರ್ ಶೆಟ್ಟಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.