ಕಾಯ್ದಂಡ ಯುವಕ ಮಂಡಲದ ಅಧ್ಯಕ್ಷರಾಗಿ ಯಶೋಧರ ಕುಲಾಲ್ ಆಯ್ಕೆ
Thursday, May 25, 2023
ಬಜಪೆ:ಎಕ್ಕಾರು ಕಾಯ್ದಂಡ ಯುವಕ ಮಂಡಲದ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.ನೂತನ ಅಧ್ಯಕ್ಷರಾಗಿ ಯಶೋಧರ ಕುಲಾಲ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಗೌರವ ಅಧ್ಯಕ್ಷರಾಗಿ ಮೋನಪ್ಪ
ಶೆಟ್ಟಿ ಎಕ್ಕಾರು, ಗೌರವ ಪ್ರಧಾನ ಕಾರ್ಯದರ್ಶಿಯಾಗಿ ತುಕರಾಮ್ ಪೂಜಾರಿ, ಉಪಾಧ್ಯಕ್ಷರಾಗಿ ದಯಾನಂದ ಶೇರಿಗಾರ್, ಪ್ರಧಾನ ಕಾರ್ಯದರ್ಶಿಯಾಗಿ ಚೇತನ್ ಸುವರ್ಣ, ಜತೆ ಕಾರ್ಯದರ್ಶಿಯಾಗಿ ಸುಬ್ರಹ್ಮಣ್ಯ, ಕೋಶಾಧಿಕಾರಿಯಾಗಿ ಪ್ರಥ್ವಿನ್ ಶೆಟ್ಟಿ ಜತೆ ಕೋಶಾಧಿಕಾರಿಯಾಗಿ ಪ್ರಜ್ವಲ್ ಶೆಟ್ಟಿ, ಕ್ರೀಡಾಕಾರ್ಯದರ್ಶಿಯಾಗಿ ಪ್ರಣಯ್ ಶೆಟ್ಟಿ, ಸಾಂಸ್ಕೃತಿಕ ಕಾರ್ಯದರ್ಶಿವಿನೋದ್ ಶೆಟ್ಟಿ, ಸಂಘಟನ ಕಾರ್ಯದರ್ಶಿಯಾಗಿ ಮಂಜುನಾಥ್ ಕುಲಾಲ್ ಅವರು ಆಯ್ಕೆಯಾದರು.