ಆ.17:ತೋಕೂರುಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ತೋಕೂರಿನಲ್ಲಿ ಸಿಯಾಳಾಭಿಷೇಕ,ಹೂವಿನ ಪೂಜೆ ,ನಾಗರ ಪಂಚಮಿ"
ತೋಕೂರು:ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ತೋಕೂರಿನಲ್ಲಿ ಆ.17 ರ ಸೋಮವಾರ "ಸಿಂಹ ಸಂಕ್ರಮಣ"ಮತ್ತು "ನಾಗರ ಪಂಚಮಿ" ನಡೆಯಲಿದೆ.
ಶ್ರೀ ಸುಬ್ರಹ್ಮಣ್ಯ ದೇವರಿಗೆ ಊರ ಪರವೂರ ಭಕ್ತರ ವತಿಯಿಂದ ಬೆಳಿಗ್ಗೆ 9.00ಕ್ಕೆ ವಿಶೇಷ ಸಿಯಾಳಭಿಷೇಕ, ರಾತ್ರಿ 7.30ಕ್ಕೆ ಸಾಮೂಹಿಕ ಹೂವಿನ ಪೂಜೆ ನಡೆಯಲಿರುವುದು.
ನಾಗರಪಂಚಮಿಯ ಪ್ರಯುಕ್ತ ನಾಗಬನದಲ್ಲಿ ಬೆಳಿಗ್ಗೆ 6.00ರಿಂದ ಪಂಚಾಮೃತ ಅಭಿಷೇಕ,ನಾಗತಂಬಿಲ ಸೇವೆಗಳು ಜರಗಲಿರುವುದು,ಬೆಳಿಗ್ಗೆ 11.00 ರಿಂದ ನಾಗದೇವರಿಗೆ ವಿಶೇಷ ಸಿಯಾಳಭಿಷೇಕ ಮಧ್ಯಾಹ್ನ 12.00ಕ್ಕೆ ಮಹಾಪೂಜೆ ಮಧ್ಯಾಹ್ನ 1.00ರಿಂದ ಮಹಾ ಅನ್ನ ಸಂತರ್ಪಣೆ ನಡೆಯಲಿರುವುದು.
ಶ್ರೀ ದೇವರ ಪ್ರಸಾದ ಸ್ವೀಕರಿಸಿ.
ದೇವರು ಅನುಗ್ರಹಕ್ಕೆ ಪಾತ್ರರಾಗಬೇಕಾಗಿ
ತೋಕೂರು ಶ್ರೀ ಸುಬ್ರಹ್ಮಣ್ಯ ದೇವಳದ ವ್ಯವಸ್ಥಾಪನ ಸಮಿತಿ
ಸಮಿತಿಯ ಅಧ್ಯಕ್ಷ ಗುರುರಾಜ್ ಎಸ್. ಪೂಜಾರಿ ಹಾಗೂ ಸದಸ್ಯರುಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.