ಮುಲ್ಕಿ: ಆಟಿ ಅಮವಾಸ್ಯೆಯ ಹಾಳೇ ಮರದ ಕೆತ್ತೆಯ ಕಷಾಯ ವಿತರಣೆ
ಮುಲ್ಕಿ: ಲಯನ್ಸ್ ಕ್ಲಬ್,ಲಿಯೋ ಕ್ಲಬ್,ರೋಟರಿ ಕ್ಲಬ್,ಯುವವಾಹಿನಿ ಘಟಕ ಮತ್ತು ಕೋಟೆಕೇರಿಯ ನವದುರ್ಗಾ ಯುವಕ ವೃಂದದ ಸಂಯುಕ್ತ ಆಶ್ರಯದಲ್ಲಿ ಬುಧವಾರ ಬೆಳಿಗ್ಗೆ ಮುಲ್ಕಿ ಬಸ್ಸು ನಿಲ್ದಾಣದ ಬಳಿ ಆಟಿ ಅಮವಾಸ್ಯೆಯ ಹಾಳೇ ಮರದ ಕೆತ್ತೆಯ ಕಷಾಯ ವಿತರಣೆ ನಡೆಯಿತು
ಈ ಸಂದರ್ಭ ಮುಲ್ಕಿ ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರವೀಣ್ ಶೆಟ್ಟಿ, ರೋಟರಿ ಕ್ಲಬ್ ಅಧ್ಯಕ್ಷೆ ಭಾನುಮತಿ ಶೆಟ್ಟಿ ಕಕ್ವಗುತ್ತು, ಯುವವಾಹಿನಿ ಘಟಕದ ಅಧ್ಯಕ್ಷೆ ಚರಿಶ್ಮಾ ಶ್ರೀನಿವಾಸ, ಕೋಟೆಕೇರಿಯ ನವದುರ್ಗಾ ಯುವಕ ವೃಂದದ ಜಯ ಪೂಜಾರಿ, ಉದಯ ಅಮೀನ್ ಮಟ್ಟು, ಸತೀಶ್ ಕಿಲ್ಪಾಡಿ, ವಿನಯ ಕುಮಾರ್, ರಿತೇಶ್ ಅಂಚನ್,ಲತಾ ಶೇಖರ್,ಸುಜಿತ್ ಸಾಲ್ಯಾನ್ , ವಿನೋದ್ ಸಾಲ್ಯಾನ್ ಬೆಳ್ಳಾಯರು ಶೋಭಾ ಸುಜಿತ್,ಲತೀಶ್ ಕಾರ್ನಾಡ್,ಕಿಶೋರ್ ಶೆಟ್ಟಿ ಬಪ್ಪನಾಡು,ಉದಯ ಕುಮಾರ್ ಶೆಟ್ಟಿ ಕಾರ್ನಾಡ್,ಪ್ರಶಾಂತ್ ಶೆಟ್ಟಿ,ನಿರುಪಮ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು