Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಕುದ್ರಿಪದವು ಬಳಿ ಮರದಿಂದ ಆಯ ತಪ್ಪಿ ಬಿದ್ದು ಯುವಕ ಸಾವು

ಕಿನ್ನಿಗೋಳಿ : ಯುವಕನೋರ್ವ ಮರದಿಂದ ಆಯತಪ್ಪಿ ಬಿದ್ದು ಸಾವನ್ನಪ್ಪಿದ ಘಟನೆ ಕುದ್ರಿಪದವು ಎಂಬಲ್ಲಿ ನಡೆದಿದೆ.  
ಮೃತ ಯುವಕನನ್ನು ಮುಲ್ಕಿ ಸಮೀಪದ ಅಂಗರಗುಡ್ಡೆ ನಿವಾಸಿ ಗಣೇಶ್ ಆಚಾರ್ಯ (42 )ಎಂದು ಗುರುತಿಸಲಾಗಿದೆ 
ಮೃತ ಗಣೇಶ್ ಆಚಾರ್ಯ ಮರ ಕಡಿಯುವ ಗುತ್ತಿಗೆ ವಹಿಸಿಕೊಂಡಿದ್ದು ಅದರಂತೆ ಕಿನ್ನಿಗೋಳಿ ಸಮೀಪದ ಕುದ್ರಿಪದವು ಕೊಟ್ರ ಪಾಡಿ ಬಳಿ ಮರ ಕಡಿಯುತ್ತಿದ್ದಾಗ ಆಯ ತಪ್ಪಿ ಬಿದ್ದು ಸಾವನ್ನಪ್ಪಿದ್ದಾನೆ 
ಮೂಡಬಿದ್ರೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ 
ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನ ಅಗಲಿದ್ದಾರೆ.