Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಶ್ರೀ ದುರ್ಗಾದೇವಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಯಕ್ಷಧ್ರುವ - ಯಕ್ಷಶಿಕ್ಷಣ ತರಗತಿ ಆರಂಭ

ಕಟೀಲು :ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ಇದರ ಯಕ್ಷಧ್ರುವ - ಯಕ್ಷಶಿಕ್ಷಣ ಯೋಜನೆ 2026 - 27 ನೇ ಸಾಲಿನ ಯಕ್ಷಗಾನ ತರಗತಿಯು ಜ್ಞಾನರತ್ನ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ (ರಿ ) ನಿಡ್ದೋಡಿ ಇದರ ಅಧೀನಕೊಳಪಟ್ಟಶ್ರೀ ದುರ್ಗಾದೇವಿ ಆಂಗ್ಲ ಮಾಧ್ಯಮ ಶಾಲೆ ನಿಡ್ಡೋಡಿಯಲ್ಲಿ  ಜೂ.8 ರ          ಸೋಮವಾರದಂದು ಆರಂಭಗೊಂಡಿತು. 
ಯಕ್ಷ ಧ್ರುವ ಪಟ್ಲ ಪೌಂಡೇಶನ್ ಮೂಡಬಿದ್ರೆ ಘಟಕದ ಉಪಾಧ್ಯಕ್ಷ  ಶಾಂತಾರಾಮ್ ಕುಡ್ವ  ದೀಪ ಬೆಳಗಿಸಿ  ಉದ್ಘಾಟಿಸಿ ಶುಭ ಹಾರೈಸಿದರು.

 ಜ್ಞಾನರತ್ನ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಭಾಸ್ಕರ್ ದೇವಸ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಯಕ್ಷ ಧ್ರುವ  ಪಟ್ಲ ಫೌಂಡೇಶನ್        ಮೂಡಬಿದ್ರಿ ಘಟಕದ ಸಂಚಾಲಕ  ಮನೋಜ್ ಕುಮಾರ್ ಶೆಟ್ಟಿ,  ರವಿ ಪ್ರಸಾದ್ ಶೆಟ್ಟಿ, ಯಕ್ಷ ಗುರು ಶ?ರಕ್ಷಿತ್ ಶೆಟ್ಟಿ ಪಡ್ರೆ ,   ವಿದ್ಯಾ ಸಂಸ್ಥೆಯ ಆಡಳಿತಾಧಿಕಾರಿ  ಸಾಗರ್ ,ಮುಖ್ಯೋಪಾದ್ಯಾಯಿನಿ ಶ್ರೀಮತಿ ಸೀಮಾ ಉಪಸ್ಥಿತರಿದ್ದರು. 
ಶಿಕ್ಷಕಿ ಶ್ರೀಮತಿ ಸುಜಾತ ಸ್ವಾಗತಿಸಿದರು. ಶಿಕ್ಷಕಿ
 ಶ್ರೀಮತಿ ಸಂಧ್ಯಾ ಕಾರ್ಯಕ್ರಮ  ನಿರೂಪಿಸಿದರು.