Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

12 ವರ್ಷ ಪೂರೈಸಿದ ಪ್ರಧಾನಿ ನರೇಂದ್ರ ಮೋದಿಯವರು ,ಕಟೀಲಿನಲ್ಲಿ ವಿಶೇಷ ಪೂಜೆ

ಕಟೀಲು:ದೇಶದ ಪ್ರಧಾನಿ ನರೇಂದ್ರ ಮೋದಿಯವರ ದೀರ್ಘಾಯುಷ್ಯ ಮತ್ತು2047ರ ವಿಕಸಿತ ಭಾರತದ ಸಂಕಲ್ಪ ಸಾಧನೆಯ ಯಶಸ್ಸಿಗೆ ಪ್ರಾರ್ಥಿಸಿ ಭಾರತೀಯ ಜನತಾ ಪಾರ್ಟಿ, ಮುಲ್ಕಿ ಮೂಡಬಿದಿರೆ  ಮಂಡಲ ವತಿಯಿಂದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪಕ್ಷದ ಹಿರಿಯರು ಹಾಗೂ ಪ್ರಮುಖರೊಂದಿಗೆ "ವಿಶೇಷ ಪೂಜೆ" ಸಲ್ಲಿಸಿದರು. ಕಟೀಲು ದೇವಳದ ಪ್ರಧಾನ ಅರ್ಚಕ ವೆಂಕಟರಮಣ ಆಸ್ರಣ್ಣ ವಿಶೇಷ ಪ್ರಾರ್ಥನೆಗೈದರು.  ಈ ಸಂದರ್ಭ ಮೂಲ್ಕಿ ಮುಡಬಿದ್ರೆ ಮಂಡಲಾಧ್ಯಕ್ಷ ದಿನೇಶ್ ಪುತ್ರನ್ ಬಿಜೆಪಿ ಮುಖಂಡರಾದ ಬಾಹುಬಲಿ ಪ್ರಸಾದ್,  ಎಂ.ಎಸ್ ಕೋಟ್ಯಾನ್, ಈಶ್ವರ್ ಕಟೀಲ್, ಶಾಂತಿ ಪ್ರಸಾದ್ ಹೆಗ್ಡೆ, ಭುವನಾಭಿರಾಮ ಉಡುಪ, ಸುನೀಲ್ ಅಳ್ವ, ಅಭಿಲಾಷ್ ಶೆಟ್ಟಿ ಕಟೀಲ್, ಪ್ರೇಮ್ ರಾಜ್ ಶೆಟ್ಟಿ ಬರ್ಕೆ, ತಿಲಕ್ ರಾಜ್ ಶೆಟ್ಟಿ , ಪದ್ಮಲತಾ ಕಟೀಲು, ಮಲ್ಲಿಕಾ ಪ್ರಕಾಶ್, ಶೈಲೇಶ್ ಅಂಚನ್, ಲೋಕಯ್ಯ ಸಾಲಿಯಾನ್, ಪುರೋಷೊತ್ತಮ್  ಶೆಟ್ಟಿಗಾರ್,  ಪ್ರಣೀಕ್ ಕಿನ್ನಿಗೋಳಿ, ಪ್ರಶಾಂತ್ ಮೂಲ್ಕಿ,  ಗೋಪಾಲಕೃಷ್ಣ, ಶೈಲೇಶ್ ಮೂಲ್ಕಿ,  ಕೇಶವ ಕರ್ಕೇರ, ನವೀನ್ ರಾಜ್ ಮೂಲ್ಕಿ, ಮಮತಾ ಪೂಂಜ, ಗೀತಾ ಲಕ್ಷೀ ಭಟ್,  ಸರೋಜಿನಿ ಗುಜರನ್, ಬೇಬಿ ಸುಂದರ ಕೋಟ್ಯಾನ್, ಪೂರ್ಣಿಮಾ ಹಳೆಯಂಗಡಿ, ರಶ್ಮಿ ಆಚಾರ್ಯ, ಮಿಥುನ್ ಆಚಾರ್ಯ, ಯತೀಶ್ ಆಚಾರ್ಯ, ದುರ್ಗಾಪ್ರಸಾದ್ ಶೆಟ್ಟಿ ಕುತ್ತೆತ್ತೂರು,  ವಿಶ್ವನಾಥ ಕಾಮತ್ ಪಡುಮಾರ್ನಾಡ್, ಸುಶಾಂತ್ ಕಟೀಲು,  ಸದಾನಂದ ಶೆಟ್ಟಿ,  ಸುಮ ಬಿ ಶೆಟ್ಟಿ,  ಮತ್ತಿತರರು ಉಪಸ್ಥಿತರಿದ್ದರು.