ಡಿಜಿಟಲ್ ಮಾಧ್ಯಮದ ಸುದ್ದಿಗೆ ಸ್ಪಂದನೆ
ಕಿನ್ನಿಗೋಳಿ ಮೂಡಬಿದಿರೆ ರಾಜ್ಯ ಹೆದ್ದಾರಿಯ ಮೂರುಕಾವೇರಿಯಿಂದ ಕಟೀಲಿಗೆ ಹೋಗುವ ಜಂಕ್ಷನ್ ಸಮೀಪ ಕುಡಿಯುವ ನೀರಿನ ಪೈಪ್ ಲೈನ್ ಕಾಮಗಾರಿಯಿಂದ ವಾಹನಿಗರಿಗೆ ತೊಂದರೆಯ ಬಗ್ಗೆ ಕಳೆದ ಕೆಲದಿನಗಳ ಹಿಂದೆ ಚಿಗುರುನ್ಯೂಸ್ ಡಿಜಿಟಲ್ ಮಾಧ್ಯಮದಲ್ಲಿ ಚಿತ್ರ ಸಹಿತ ಮಾಹಿತಿ ಪ್ರಕಟವಾಗಿತ್ತು.ಈ ಬಗ್ಗೆ ಕಿನ್ನಿಗೋಳಿ ಪ.ಪಂ ಅಧ್ಯಕ್ಷರು ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸ್ಪಂದಿಸಿದ್ದು,ಆಪಾಯಕಾರಿಯಾಗಿ ಪರಿಣಮಿಸಿದ ಜಂಕ್ಷನ್ ಸಮೀಪದ ಮಣ್ಣಿನ ಹಂಪ್ಸ್ ಗಳನ್ನು ತೆಗೆದು ಕಾಂಕ್ರೀಟ್ ನಿಂದ ಹೆದ್ದಾರಿಯ ಜಂಕ್ಷನ್ ನ ಮುಚ್ಚುವ ಕಾರ್ಯವು ನಡೆಯುತ್ತಿದೆ.