-->

ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ಬ್ರಹ್ಮಕಲಶೋತ್ಸವ

ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ಬ್ರಹ್ಮಕಲಶೋತ್ಸವ
ಶ್ರೀಕ್ಷೇತ್ರ ಸಸಿಹಿತ್ಲು ಬ್ರಹ್ಮಕಲಶೋತ್ಸವ ಮಾ.4 ರಿಂದ ಮಾ.8 ರವರೆಗೆ
ಮಾ.20 ರಿಂದ 24 ರ ತನಕ ಶ್ರೀಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನ ಸಸಿಹಿತ್ಲುವಿನಲ್ಲಿ ಕಾಲಾವಧಿ ನೇಮೋತ್ಸವ

ಮಾ.20 ರಿಂದ 24 ರ ತನಕ ಶ್ರೀಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನ ಸಸಿಹಿತ್ಲುವಿನಲ್ಲಿ ಕಾಲಾವಧಿ ನೇಮೋತ್ಸವ

ಹಳೆಯಂಗಡಿ:ಶ್ರೀಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನ ಸಸಿಹಿತ್ಲುವಿನಲ್ಲಿ ಕಾಲಾವಧಿ ನೇಮೋತ್ಸವವು ಮಾ.20 ರಿಂದ ಮಾ.24 ರ ತನಕ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.ಮಾ.20 ರ ಶುಕ್ರವಾರ ರಾತ್ರಿ 7 ಕ್ಕೆ ವಾಸ್ತುಪೂಜೆ ,ಮಾ.21 ರ ಶನಿವಾರ ಬೆಳಿಗ್ಗೆ ನಾಗದೇವರಿಗೆ ತನು ತಂಬಿಲ,ಬ್ರಹ್ಮರಿಗೆ ತಂಬಿಲ ಸೇವೆ,ರಕ್ತೇಶ್ವರೀ ದೇವಿಗೆ ಹೂವಿನ ಪೂಜೆ,ದೈವಗಳ ಶುದ್ದೀಕರಣ,ದೃಡಕಲಶ ನಡೆಯಲಿದೆ.ಸಂಜೆ 7 ಕ್ಕೆ ಕ್ಷೇತ್ರದಲ್ಲಿ ಕಾಂತುಲಕಣ ಗಡಿಪ್ರದಾನರ ಮನೆಯತಂಬಿಲ ಸೇವೆ ,ಕಾಂತಾಬಾರೆ ಬೂದಾಬಾರೆ ಯರಿಗೆ ಅನ್ನ ನೈವೆಧ್ಯ,ಅಗೇಲು ಸೇವೆ,ಮಾಣಿಬಾಲೆ ಮಾಯಾಂದಾಲ್ ಅಗೇಲು ಸೇವೆ,ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಲಿದೆ.ಮಾ.22ರ ಆದಿತ್ಯವಾರ ಸಂಜೆ  4ಕ್ಕೆ ಚಪ್ಪರ ಏರುವುದು,ಭಂಡಾರ ತರಲು ಖಂಡಿಗೆ ಬೀಡಿಗೆ ತೆರಳುವುದು.ರಾತ್ರಿ 9 ಕ್ಕೆ ಶ್ರೀ ಕ್ಷೇತ್ರ ಖಂಡಿಗೆ ಧರ್ಮರಸು ಉಳ್ಳಾಯ ಮತ್ತು ಸಹಪರಿವಾರ ದೈವಗಳ ಭಂಡಾರ ಶ್ರೀಕ್ಷೇತ್ರಕ್ಕೆ ಬರುವುದು ಮತ್ತು ಕಾಂತು ಲಕಣ ಗಡಿ ಪ್ರದಾನರ ಮನೆಯಿಂದ ದೈವಗಳ ಭಂಡಾರ ಆಗಮನ,ಧ್ವಜಾರೋಹಣ ,ಅನ್ನ ಸಂತರ್ಪಣೆ ,ಮಾ.23 ರ ಸೋಮವಾರ ಬೆಳಿಗ್ಗೆ  5ಕ್ಕೆ ಉಳ್ಳಾಯ ದೈವದ ನೇಮೋತ್ಸವ,ಇಷ್ಟದೇವತೆ,ಮೂಲ ಮಹಿಷಂದಾಯ,ಬಬ್ಬರ್ಯ ಹಾಗೂ ಪರಿವಾರ ದೈವಗಳ ನೇಮ ಮತ್ತು ಕಾಂತಾಬಾರೆ ಬೂದಾಬಾರೆ ಯರಿಗೆ ಮಾಯಾಂದಾಲ್ ಶಕ್ತಿಗೆ ಪಂಚಕಜ್ಜಾಯ ಸೇವೆ,ಮಧ್ಯಾಹ್ನ ಅನ್ನ ಸಂತರ್ಪಣೆ ,3:30 ರಿಂದ ಓಡ್ಯಂತಾಯ ದೈವದ ನೇಮೋತ್ಸವ ,ರಾತ್ರಿ 9 ರಿಂದ ಜಾರಂದಾಯ ಬಂಟ,ಜುಮಾದಿ ಬಂಟ,ಕೊಡಮಣಿತ್ತಾಯ ,ಖಂಡಿಗೆ ಬೀಡಿನ ಕಾಂತೇರಿ ಜುಮಾದಿ ,ಪಿಲಿಚಾಮುಂಡಿ  ದೈವದ ನೇಮವು ನಡೆಯಲಿದೆ.ಮಾ.24 ರ ಮಂಗಳವಾರ ಬೆಳಿಗ್ಗೆ 5 ಕ್ಕೆ ಧ್ವಜಾವರೋಹಣ ,ಕಾಂತು ಲಕಣ ಗಡಿಪ್ರದಾನರ ಮನೆಗೆ ಹಾಗೂ ಖಂಡಿಗೆ ಬೀಡಿಗೆ ಭಂಡಾರ ನಿರ್ಗಮನವಾಗಲಿದೆ.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ