ಎಕ್ಕಾರು:ಬಡಕರೆ ಧರ್ಮದೈವ ಶ್ರೀ ಜಾರಂದಾಯ ಮತ್ತು ಬಂಟ ದೈವದ ನೇಮೋತ್ಸವ ಹಾಗೂ ಎಕ್ಕಾರು ವಿಜಯ ಯುವ ಸಂಗಮ(ರಿ) ನ 29 ನೇ ವರ್ಷದ ವಾರ್ಷಿಕೊತ್ಸವ ಕಾರ್ಯಕ್ರಮ
Tuesday, February 10, 2026
ಬಜಪೆ:ಎಕ್ಕಾರು ಬಡಕರೆ ಯ ಶ್ರೀ ಜಾರಂದಾಯ ದೈವಸ್ಥಾನದಲ್ಲಿ ಬಡಕರೆ ಧರ್ಮದೈವ ಶ್ರೀ ಜಾರಂದಾಯ ಮತ್ತು ಬಂಟ ದೈವದ ವಾರ್ಷಿಕ ನೇಮೋತ್ಸವ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಜಿಲ್ಲಾ ಪ್ರಶಸ್ತಿ ಪುರಸ್ಕೃತ
ಎಕ್ಕಾರು ವಿಜಯ ಯುವ ಸಂಗಮ(ರಿ) ನ 29 ನೇ ವರ್ಷದ ವಾರ್ಷಿಕೊತ್ಸವ ಕಾರ್ಯಕ್ರಮವು ಫೆ.13 ರ ಶುಕ್ರವಾರದಂದು ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.ವಾರ್ಷಿಕೋತ್ಸವದ ಅಂಗವಾಗಿ ರಾತ್ರಿ 7 ರಿಂದ ಬರವುದ ಬೊಳ್ಳಿ ರಾಜೇಶ್ ಪರ್ಕಳ ರಚಿಸಿರುವ ವಿಜಯ ಯುವ ಸಂಗಮದ ಸದಸ್ಯರ ಅಭಿನಯದಲ್ಲಿ ತುಳು ಹಾಸ್ಯಮಯ ನಾಟಕ 'ಆಲ್ ಎನ್ನಾಲ್ ' ಸ್ಥಳೀಯ ಪ್ರತಿಭೆಗಳು ಹಾಗೂ ವಿಜಯ ಯುವ ಸಂಗಮದ ಸದಸ್ಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.ರಾತ್ರಿ 8 ರಿಂದ ಅನ್ನ ಸಂತರ್ಪಣೆ ಹಾಗೂ 11 ರಿಂದ ಶ್ರೀ ಜಾರಂದಾಯ ಹಾಗೂ ಬಂಟ ದೈವದ ನೇಮೋತ್ಸವವು ನಡೆಯಲಿದೆ.