ಕೂಳೂರು:ಕೂಳೂರು ರಾಯಿಕಟ್ಟೆ ಪರಿಸರದ ಫಲ್ಗುಣಿ ನದಿ ಕೊಳಚೆ ನೀರು ತುಂಬಿ ಕಲುಷಿತಗೊಂಡಿದ್ದು, ಸ್ಥಳಕ್ಕೆ ಮಂಗಳೂರು ಉತ್ತರ ಶಾಸಕ ಡಾ. ವೈ ಭರತ್ ಶೆಟ್ಟಿಯವರು ಭೇಟಿ ನೀಡಿ ಸ್ಥಳ ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
ಶಾಸಕರ ಸೂಚನೆಯ ಮೇರೆಗೆ ನದಿ ನೀರಿನ ಗುಣ ಮಟ್ಟ ಪರಿಶೀಲನೆಗೆ ಮಾಲಿನ್ಯ ಇಲಾಖೆ ಹಾಗೂ ನದಿ ನೀರಿನ ಮೀನುಗಳ ಸಾಯುವಿಕೆಯ ಕುರಿತು ಮೀನುಗಾರಿಗೆ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು. ಇದರ ಮುಂದುವರಿದ ಕಾರ್ಯವಾಗಿ, ನದಿಯ ಸ್ವಚ್ಛತೆಗಾಗಿ ಹಾಗೂ ಮೀನುಗಳ ಸಾಯುವಿಕೆ ತಡೆಗಟ್ಟಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.