ಕಿನ್ನಿಗೋಳಿ: ರಘುವೀರ್ ಕಾಮತ್ ಮೂರುಕಾವೇರಿ (59) ಗುರುವಾರ ನಿಧನ ಹೊಂದಿದರು. ರಾಷ್ಟೀಯ ಸ್ವಯಂ ಸೇವಾಕ ಸಂಘ ಮತ್ತು ಬಿಜೆಪಿಯ ಹಿರಿಯ ಕಾರ್ಯಕರ್ತರಾಗಿ ಅನೇಕ ವರ್ಷಗಳ ಕಾಲ ದುಡಿದಿದ್ದು, ಕಿನ್ನಿಗೋಳಿ ರಾಮ ಮಂದಿರ, ಮತ್ತು ಹಲವಾರು ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಮೃತರು ತಾಯಿ, ಪತ್ನಿ ಮತ್ತು ಒರ್ವ ಪುತ್ರನನ್ನು ಅಗಲಿದ್ದಾರೆ.