ಕೈಕಂಬ:ಕಂದಾವರ ಗ್ರಾಮ ಪಂಚಾಯತ್ ನ ನೂತನ ಸಂಜೀವಿನಿ ಕಟ್ಟಡದ ಉದ್ಘಾಟನೆಯನ್ನು ಶಾಸಕ ಡಾ.ವೈ ಭರತ್ ಶೆಟ್ಟಿಯವರು ನೆರವೇರಿಸಿದರು.
ಈ ಸಂದರ್ಭದಲ್ಲಿ, ಪಂಚಾಯತಿನ ಅಧ್ಯಕ್ಷ ಶಾಲಿನ್ ಎಸ್, ಸಂಜೀವಿನಿ ಸಂಘದ ಜಿಲ್ಲಾ ಪ್ರಮುಖರಾದ ಶಂಕುತಲಾ, ಕಂದಾವರ ಗ್ರಾಮದ ಸಂಜೀವಿನಿ ಸಂಘದ ಅಧ್ಯಕ್ಷ ಸುಲೋಚನಾ ಶೆಟ್ಟಿ, ಕಂದಾವರ ಪಂಚಾಯತಿನ ಉಪಾಧ್ಯಕ್ಷ ಉದಯ ಆರ್ ರಾವ್, ಪಂಚಾಯತಿನ ಸದಸ್ಯರು, ಸಂಜೀವಿನಿ ಸಂಘದ ಸದಸ್ಯರು,ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.