Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಏಳಿಂಜೆಯ ಖಾಸಗಿ ಕಾರ್ಯಕ್ರಮದಲ್ಲಿ ಅಂಧ್ರಪ್ರದೇಶದ ರಾಜ್ಯಪಾಲರು

ಕಿನ್ನಿಗೋಳಿ:ಆಂಧ್ರಪ್ರದೇಶದ ರಾಜ್ಯಪಾಲ
 ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶರಾದ ಎಸ್. ಅಬ್ದುಲ್ ನಜೀರ್ ಅವರು ಶುಕ್ರವಾರದಂದು  ಏಳಿಂಜೆ ಕೊಜಪಾಡಿ ಜಯಕುಮಾರ್ ಶೆಟ್ಟಿಯವರ ಮನೆಗೆ ಭೇಟಿ ನೀಡಿದರು. ಜಯಕುಮಾರ್ ಅವರ ಮಗಳು  ಎಡ್ವಕೇಟ್ ಆದ ದೀಕ್ಷಾ ಅವರು ಈ ಹಿಂದೆ ಅಬ್ದುಲ್ ನಜೀರ್ ಬಳಿ ತರಬೇತಿ ಪಡೆದಿದ್ದು,  ಫೆಬ್ರವರಿ‌ 6 ರಂದು  ದೀಕ್ಷಾ ರವರ   ಮದುವೆ ಇದ್ದು ಮದುವೆ ಸಮಾರಂಭದಲ್ಲಿ ಭಾಗವಹಿಸಲು ಅನಾನುಕೂಲವಾದರಿಂದ ಮದುವೆಗೆ ಮುಂಚಿತವಾಗಿ ಶುಕ್ರವಾರ ದೀಕ್ಷಾ ಮನೆಗೆ ಭೇಟಿ ನೀಡಿದರು. ಈ ಸಂದರ್ಭ ಬಾಲಕೃಷ್ಣ,  ಜಯಕುಮಾರ್, ಪತ್ನಿ ಶಕುಂತಳ   ಮದುಮಗಳು ದೀಕ್ಷಾ, ಕುಟುಂಬವರ್ಗದವರು,  ಐಕಳ ಗ್ರಾ.ಪಂ  ಅಧ್ಯಕ್ಷ ದಿವಾಕರ ಚೌಟ, ಪಂಚಾಯತ್ ಸದಸ್ಯರು ಹಾಗೂ  ಗ್ರಾಮಸ್ಥರು ಉಪಸ್ಥಿತರಿದ್ದರು.