ಏಳಿಂಜೆಯ ಖಾಸಗಿ ಕಾರ್ಯಕ್ರಮದಲ್ಲಿ ಅಂಧ್ರಪ್ರದೇಶದ ರಾಜ್ಯಪಾಲರು
Friday, January 30, 2026
ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಾಧೀಶರಾದ ಎಸ್. ಅಬ್ದುಲ್ ನಜೀರ್ ಅವರು ಶುಕ್ರವಾರದಂದು ಏಳಿಂಜೆ ಕೊಜಪಾಡಿ ಜಯಕುಮಾರ್ ಶೆಟ್ಟಿಯವರ ಮನೆಗೆ ಭೇಟಿ ನೀಡಿದರು. ಜಯಕುಮಾರ್ ಅವರ ಮಗಳು ಎಡ್ವಕೇಟ್ ಆದ ದೀಕ್ಷಾ ಅವರು ಈ ಹಿಂದೆ ಅಬ್ದುಲ್ ನಜೀರ್ ಬಳಿ ತರಬೇತಿ ಪಡೆದಿದ್ದು, ಫೆಬ್ರವರಿ 6 ರಂದು ದೀಕ್ಷಾ ರವರ ಮದುವೆ ಇದ್ದು ಮದುವೆ ಸಮಾರಂಭದಲ್ಲಿ ಭಾಗವಹಿಸಲು ಅನಾನುಕೂಲವಾದರಿಂದ ಮದುವೆಗೆ ಮುಂಚಿತವಾಗಿ ಶುಕ್ರವಾರ ದೀಕ್ಷಾ ಮನೆಗೆ ಭೇಟಿ ನೀಡಿದರು. ಈ ಸಂದರ್ಭ ಬಾಲಕೃಷ್ಣ, ಜಯಕುಮಾರ್, ಪತ್ನಿ ಶಕುಂತಳ ಮದುಮಗಳು ದೀಕ್ಷಾ, ಕುಟುಂಬವರ್ಗದವರು, ಐಕಳ ಗ್ರಾ.ಪಂ ಅಧ್ಯಕ್ಷ ದಿವಾಕರ ಚೌಟ, ಪಂಚಾಯತ್ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.