ಜರ್ಗುಮ್ ಫೌಂಡೇಶನ್ ಶಾಂತಿ ನಗರದ ಸದಸ್ಯರಿಂದ ಉಮ್ರಾ ಯಾತ್ರೆ,ಬಜ್ಪೆ ಟೀಮ್ ಕರಾವಳಿಯಿಂದ ಸನ್ಮಾನ
Friday, November 7, 2025
ಬಜಪೆ:ಜರ್ಗುಮ್ ಫೌಂಡೇಶನ್ ಶಾಂತಿ ನಗರದ ಸುಮಾರು 9 ಸದಸ್ಯರು ಉಮ್ರಾ ಯಾತ್ರೆ ಕೈಗೊಳ್ಳಲಿದ್ದು , ಅವರನ್ನು ಟೀಮ್ ಕರಾವಳಿ ಬಜ್ಪೆ ಯ ಸ್ಥಾಪಕಾಧ್ಯಕ್ಷ ನಿಸಾರ್ ಕರಾವಳಿ ಹಾಗೂ ಟೀಮ್ ನ ಸದಸ್ಯರು ಸೇರಿ ಸನ್ಮಾನಿಸಿ ಬಿಳ್ಕೊಟ್ಟರು .ಈ ಸಂದರ್ಭದಲ್ಲಿ ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಸಿರಾಜ್ ಬಜ್ಪೆ ,ಎಸ್ ಡಿ ಪಿ ಐ ಮುಖಂಡ ಇಸ್ಮಾಯಿಲ್ ಇಂಜಿನಿಯರ್ ,ಧರ್ಮಗುರುಗಳಾದ
ಮೊನಕ , ಸಲೀಮ್ ಹಾಜಿ ,ಉದ್ಯಮಿ ಇಫ್ತಿಕಾರ್ ಹಾಜಿ ,ಕೊಯಕಾ ,ಹಫೀಜ್ ಕೊಳಂಬೆ ,ಉದ್ಯಮಿ ಜಬ್ಬಾರ್ ಉಪಸ್ಥಿತರಿದ್ದರು.