-->

ಮಾರಾಟಕ್ಕೆ ಇದೆ ಇಂದೇ ಸಂಪರ್ಕಿಸಿರಿ

ಮಾರಾಟಕ್ಕೆ ಇದೆ ಇಂದೇ ಸಂಪರ್ಕಿಸಿರಿ
ಮಾರಾಟಕ್ಕೆ ಇದೆ ಇಂದೇ ಸಂಪರ್ಕಿಸಿರಿ

ಕಟೀಲು ಶ್ರೀದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ,ಏಳನೇ ಮೇಳದ ಪಾದಾರ್ಪಣೆ
ಸುರತ್ಕಲ್: ಡಿ‌.19ರಿಂದ ಕೆಎಫ್ ಸಿ ಟ್ರೋಫಿ 2025

ಸುರತ್ಕಲ್: ಡಿ‌.19ರಿಂದ ಕೆಎಫ್ ಸಿ ಟ್ರೋಫಿ 2025

ಸುರತ್ಕಲ್: ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಜನಮನಾಸದಲ್ಲಿರುವ ಸುರತ್ಕಲ್ ನ ಕೃಷ್ಣಾಪುರ ಫ್ರೆಂಡ್ಸ್ ಸರ್ಕಲ್ ಇದರ ಬಹುನಿರೀಕ್ಷಿತ ಶುಲ್ಕ ರಹಿತ ಹೊನಲು ಬೆಳಕಿನ ಕೆ.ಎಫ್. ಸಿ ಟ್ರೋಫಿ 2025 ಪಂದ್ಯಾಕೂಟದ ದಿನಾಂಕ ಬಿಡುಗಡೆ ಮತ್ತು ಬ್ರೋವ್ಚರ್ ಅನಾವರಣ ಕಾರ್ಯಕ್ರಮ ಕೃಷ್ಣಾಪುರ ಕೆಎಫ್ ಸಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನೆರವೇರಿತು.

ಈ ವೇಳೆ  ಕೆಎಫ್ ಸಿ ಟ್ರೋಫಿ - 2025ಯ ಬ್ರೋವ್ಚರ್ ಅನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಇತರ ಗಣ್ಯರು ಸೇರಿ ಆನಾವರಣಗೊಳಿಸಿದರು.

ಬಳಿಕ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರು,  ಕೃಷ್ಣಾಪುರ ಫ್ರೆಂಡ್ಸ್ ಸರ್ಕಲ್ ಕೇವಲ ಕ್ರೀಡೆಗೆ ಮಾತ್ರ ಸೀಮಿತವಾಗಿರದೆ ಸಮಾಜ ಸೇವಯಲ್ಲೂ ಮುಂದೆ ಇದೆ. ಇದರ ಸೌದಿ ಅರೆಬಿಯಾ ಘಟಕದ ಸದಸ್ಯರು ತಮ್ಮ ದುಡಿಮೆಯ ಭಾಗವನನ್ನು ಜನ್ಮ ಭೂಮಿಗೆ ಸಮರ್ಪಿಸುತ್ತಿರುವುದು ಸಂತೋಷದ ವಿಚಾರ. ಜಿಲ್ಲಾ ಮಟ್ಟದಲ್ಲಿನ‌ ಸಂಸ್ಥೆಯ ಸಾಮಾಜಿಕ ಕಳಕಳಿಯ ಸೇವೆ‌ ಮುಂದಿನ ದಿನಗಳಲ್ಲಿ ರಾಜ್ಯ ಮಟ್ಟಕ್ಕೂ ವಿಸ್ತರಣೆಗೊಂಡು ಇನ್ನಷ್ಟು ಜನರಿಗೆ ತಲುಪಲಿ ಎಂದು ಶುಭಹಾರೈಸಿದರು.

ಈ ಸಂಧರ್ಭ ಸಂಸ್ಥೆಯ ಅಧ್ಯಕ್ಷ ಸಾದಿಕ್ ಮಾತನಾಡಿ, ಕೃಷ್ಣಾಪುರ ಫ್ರೆಂಡ್ಸ್ ಸರ್ಕಲ್ ನ 7ನೇ ಹೊನಲು ಬೆಳಕಿನ ಪಂದ್ಯಾಕೂಟವು ಡಿ. 19ರಿಂದ 21ರ ವರೆಗೆ ನಡೆಯಲಿದೆ. ಕೇವಲ ಕ್ರೀಡೆ ಮಾತ್ರವಲ್ಲದೆ ಈ ಭಾಗದಲ್ಲಿ ಸುಸಜ್ಜಿತ ಡಯಾಲೀಸಿಸ್ ಕೇಂದ್ರ ಸ್ಥಾಪಿಸುವ ಕನಸು ನಮ್ಮ ಮುಂದಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕೃಷ್ಣಾಪುರ ಫ್ರೆಂಡ್ಸ್ ಸರ್ಕಲ್ ಪ್ರೋತ್ಸಾಹಕರಾದ ಸಾದಿಕ್ ಅಲ್ ಗಸೀಮ್, ನವೀದ್ ಕೃಷ್ಣಾಪುರ, ಕೃಷ್ಣಾಪುರ ಫ್ರೆಂಡ್ಸ್ ಸರ್ಕಲ್  ಉಪಾಧ್ಯಕ್ಷ ಹನೀಫ್, ಉದ್ಯಮಿಗಳಾದ ಕಬೀರ್, ಶಕೀಲ್ ಮತ್ತಿತರರು ಉಪಸ್ಥಿತರಿದ್ದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ