ಸೂರ್ಯಕಾಂತ್ ಸುವರ್ಣ ಅವರ ಚಿಂತನೆಗೆ ಸೂಕ್ತ ಸ್ಥಾನಮಾನ : ಅಶೋಕ್ ಪೂಜಾರ್
Tuesday, October 28, 2025
ಮೂಲ್ಕಿ : ಸರ್ವಧರ್ಮದ ಅಗ್ರಗಣ್ಯ ನಾಯಕ ಜಯ ಸುವರ್ಣರ ಹಾದಿಯಲ್ಲಿಯೇ ಸಾಗುತ್ತಿರುವ ಸೂರ್ಯಕಾಂತ್ ರವರ ಸಮಾಜ ಸ್ಪಂದನೆಗೆ ಅವರು ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷರಾಗಿ ಅವರ ಚಿಂತನೆಗೆ ಸೂಕ್ತ ಸ್ಥಾನಮಾನವಾಗಿದೆ, ಅವರಿಂದ ಇನ್ನಷ್ಟು ಸಮಾಜದ ಪ್ರಗತಿ ಕಾಣಲಿ ಅಂದು ಆಶಿಸುತ್ತೇನೆ ಎಂದು
ದಕ್ಷಿಣ ಕನ್ನಡ-ಉಡುಪಿಯ ಕರಾವಳಿ ಆದಿ ಜಾಂಬವ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಅಶೋಕ್ ಪೂಜಾರ್ ಹೇಳಿದರು.
ಅವರು ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸೂರ್ಯಕಾಂತ್ ಸುವರ್ಣ ಅವರನ್ನು ಅಭಿನಂದಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್, ಮೂಲ್ಕಿ ಪಟ್ಟಣ ಪಂಚಾಯತ್ ನ ಸದಸ್ಯರಾದ ಯೋಗೀಶ್ ಕೋಟ್ಯಾನ್, ಮಂಜುನಾಥ್ ಕಂಬಾರ್, ಲೋಕೇಶ್ ಕೋಟ್ಯಾನ್, ಯುವ ಸಂಘಟಕ ಚರಣ್ ಕೊಳಚಿಕಂಬಳ ಹಾಗೂ ಕಿಶೋರ್ ಟೈಲರ್ ಮತ್ತಿತರರು ಉಪಸ್ಥಿತರಿದ್ದರು.