ಕ್ರೀಡೆಯಲ್ಲಿ ಸೋಲು ಗೆಲುವು ಸಹಜ - ತುಷಾರ್ ಸುರೇಶ್
Sunday, August 31, 2025
ಬಜಪೆ:ಕ್ರೀಡೆಯಲ್ಲಿ ಸೋಲು ಗೆಲುವು ಸಹಜ ಕ್ರೀಡಾ ಸ್ಫೂರ್ತಿ ಮುಖ್ಯ ಎಂದು ದಕ್ಷಿಣ ಕನ್ನಡ ಜಿಲ್ಲಾ ಫ್ಲವರ್ ಡೆಕೋರೇಷನ್ ಮಾಲಕರ ಸಂಘದ ಅಧ್ಯಕ್ಷ ತುಷಾರ್ ಸುರೇಶ್ ಹೇಳಿದರು.ಅವರು ವೀಣಾ ಡೆಕೋರ್ & ಇವೆಂಟ್ಸ್ ಮಾಲಕ ನವೀನ್ ಚಂದ್ರ ಸಾಲ್ಯಾನ್ ಮಾಲಕತ್ವದ V.d trophy - 2025 ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟವನ್ನು ಕರಂಬಾರು ಕೊಪ್ಪಲ ಕ್ರಿಡಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭ ದ.ಕ ಜಿಲ್ಲಾ ಪ್ಲವರ್ ಡೇಕೋರೇಶನ್ ಯುನಿಯನ್ ನ ಉಪಾಧ್ಯಕ್ಷ ಸುರೇಶ್ ಪೂಜಾರಿ , ಸುರೇಶ್ ಪೂಜಾರಿ ಕೊಪ್ಪಲ, ಮಳವೂರು ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷ ಗಣೇಶ್ ಅರ್ಬಿ , ಕಚ್ಚೂರು ಮಾಲ್ಡಿ ಕ್ಯಾಂಟಿನ್ ಮಾಲಕ ಶ್ರೀನಿವಾಸ ಕಾವೂರು , ಸುರೇಂದ್ರ ಕಾಮತ್ ಕೆಂಜಾರು, ಸ್ವಾನಿ ಅಂಚನ್ ಹಾಗೂ ಮೊದಲಾದವರು ಉಪಸ್ಥಿತರಿದ್ದರು. ರಾಕೇಶ್ ಕುಂದರ್ ಕಾರ್ಯಕ್ರಮ ನಿರೂಪಿಸಿದರು ವಿನಯ್ ಸಾಲ್ಯಾನ್ ವಂದಿಸಿದರು.