-->
ಗ್ರಾಮೀಣ ಭಾಗದ ವೈದ್ಯಕೀಯ ಸೇವೆಯಲ್ಲಿ ದುರ್ಗಾ ಸಂಜೀವನಿ ಮಣಿಪಾಲ್ ಆಸ್ಪತ್ರೆ ಮಾದರಿ -- ಡಾ ಎಚ್ ಎಸ್ ಬಲ್ಲಾಳ್

ಗ್ರಾಮೀಣ ಭಾಗದ ವೈದ್ಯಕೀಯ ಸೇವೆಯಲ್ಲಿ ದುರ್ಗಾ ಸಂಜೀವನಿ ಮಣಿಪಾಲ್ ಆಸ್ಪತ್ರೆ ಮಾದರಿ -- ಡಾ ಎಚ್ ಎಸ್ ಬಲ್ಲಾಳ್

ಕಟೀಲು:ಕೇವಲ 5 ವರ್ಷದಲ್ಲಿ ದುರ್ಗಾ ಸಂಜೀವನಿ ಮಣಿಪಾಲ್ ಆಸ್ಪತ್ರೆ ಗಣನೀಯವಾದ ಮೈಲುಗಲ್ಲು ಸ್ಥಾಪಿಸಿದೆ ಮಾದರಿ ಆಸ್ಪತ್ರೆಯಾಗಿ ಜನರ ಮೆಚ್ಚುಗೆ ಗಳಿಸಿದೆ ಎಂದು ಮಾಹೆ ಚಾನ್ಸಲರ್ ಡಾ.ಎಚ್.ಎಸ್ ಬಲ್ಲಾಲ್ ಹೇಳಿದರು.ಅವರು 
ದುರ್ಗಾ ಸಂಜೀವನಿ ಮಣಿಪಾಲ್ ಆಸ್ಪತ್ರೆಯ ಪಂಚಮ ಸಂಭ್ರಮ ಮತ್ತು ಎಮ್ ಆರ್ ಪಿ ಎಲ್ ಕೊಡುಗೆಯಾಗಿ ನೀಡಿದ ಹೋಮ್ ಕೇರ್ ವ್ಯಾನ್ -ಮನೆ ಬಾಗಿಲಿಗೆ ಆರೋಗ್ಯ ಸೇವೆ ವಾಹನವನ್ನು ಕಟೀಲು ಅಸ್ಪತ್ರೆಯಲ್ಲಿ  ಉದ್ಘಾಟನೆಗೊಳಿಸಿ ಮಾತನಾಡಿದರು.
 ಕಟೀಲು  ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ಅರ್ಚಕ ವೇದಮೂರ್ತಿ  ವೆಂಕಟರಮಣ ಅಸ್ರಣ್ಣ  ಆಶೀರ್ವಚನ ನೀಡಿದರು.ಉಪಕುಲಪತಿ ಲೆಫ್ಟಿನೆಂಟ್ ಜನರಲ್ ಡಾ ಎಮ್. ಡಿ. ವೆಂಕಟೇಶ್, ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಸನತ್ ಕುಮಾರ್ ಶೆಟ್ಟಿ,ಸಂಜೀವನಿ ಟ್ರಸ್ಟ್  ನ ಅಧ್ಯಕ್ಷ  ಡಾ.ಸುರೇಶ್ ರಾವ್,ಮಾಹೆ ಮಣಿಪಾಲದ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಆನಂದ್ ವೇಣುಗೋಪಾಲ್ ,ಎಮ್. ಆರ್. ಪಿ.ಎಲ್  ನ ಎಚ್.ಆರ್. ಡಾ.ಅರವಿಂದ್ ,ಕೆ. ಎಮ್. ಸಿ ಆಸ್ಪತ್ರೆ ಯ ಡೀನ್ ಡಾ ಉಣ್ಣಿ ಕೃಷ್ಣನ್,
ಡಾ.ಪ್ರಸನ್ನ ಮಿತ್ರ, ವೇದಿಕೆ ಯಲ್ಲಿ ಉಪಸ್ಥಿತರಿದ್ದರು.
ಸಾಧಕ ವೈದ್ಯರಿಗೆ ಗೌರವಾರ್ಪಣೆ ನಡೆಯಿತು. ಆಸ್ಪತ್ರೆ ಯೊಂದಿಗೆ ನಿರಂತರ ಸಂಪರ್ಕದೊಂದಿಗೆ ಇದ್ದ ಸ್ಥಳೀಯ ಸಂಘ ಸಂಸ್ಥೆ ಯ ಮುಖ್ಯಸ್ಥರನ್ನು ವೇದಿಕೆ ಯಲ್ಲಿ ಗೌರವಿಸಲಾಯಿತು.
ದುರ್ಗಾ ಸಂಜೀವನಿ ಮಣಿಪಾಲ್ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ .ಶಿವಾನಂದ ಪ್ರಭು ಸ್ವಾಗತಿಸಿದರು.
ನಿತೇಶ್ ಶೆಟ್ಟಿ ಎಕ್ಕಾರು ಕಾರ್ಯಕ್ರಮ ನಿರೂಪಿಸಿದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ