ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದಲ್ಲಿಜೀರ್ಣೋದ್ಧಾರ, ದೇವರ ನೂತನ ಶಿಲಾಮಯ ಗರ್ಭಗುಡಿಯ ಶಿಲಾನ್ಯಾಸ ಕಾರ್ಯಕ್ರಮ
Thursday, June 12, 2025
ಜೀರ್ಣೋದ್ಧಾರದ ಅಂಗವಾಗಿ ದೇವರ ನೂತನ ಶಿಲಾಮಯ ಗರ್ಭಗುಡಿಯ ಶಿಲಾನ್ಯಾಸ ಕಾರ್ಯಕ್ರಮ ಜೂ.13 ರಂದು ಬೆಳಗ್ಗೆ 10.40ಕ್ಕೆ ಕೃಷ್ಣಾಪುರ ಮಠಾಧೀ ಶರಾದ ಶ್ರೀವಿದ್ಯಾಸಾಗರ ಶ್ರೀಪಾದರಿಂದ ನಡೆಯಲಿದೆ.ವೇದಮೂರ್ತಿ ಕಳತ್ತೂರು ಕರುಣಾಕರ ತಂತ್ರಿ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ 8ಕ್ಕೆ ಪಂಚಗವ್ಯ ಪುಣ್ಯಾಹ, ವಾಸ್ತುಪೂಜೆ, ಭೂವರಾಹ ಹೋಮ, ಶಿಲಾ ಪೂಜೆ, ಶಿಲಾನ್ಯಾಸ, ಅನ್ನಸಂತರ್ಪಣೆ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮೊಕ್ತೇಸರ ಪಟೇಲ್ ವಾಸುದೇವ ರಾವ್ ತಿಳಿಸಿದ್ದಾರೆ.