ಕಾಂಗ್ರೇಸ್ ಸರಕಾರದ ಜನ ವಿರೋಧಿ ನೀತಿಗಳನ್ನು ಖಂಡಿಸಿ ಕಿನ್ನಿಗೋಳಿ ಪಟ್ಟಣ ಪಂಚಾಯತ್ ಮುಂಭಾಗ ಪ್ರತಿಭಟನೆ
Tuesday, June 24, 2025
ಕಿನ್ನಿಗೋಳಿ:ಕಾಂಗ್ರೇಸ್ ಸರಕಾರ ಭ್ರಷ್ಟತೆಯಿಂದ ಕೂಡಿದೆ ಎಂಬುದನ್ನು ವಿರೋದ ಪಕ್ಷ ಹೇಳಬೇಕಾಗಿಲ್ಲ ಕಾಂಗ್ರೇಸ್ ಶಾಸಕರೇ ಆರೋಪಿಸುತ್ತಿದ್ದಾರೆ ಎಂದು ಜಿಲ್ಲಾ ಬಿಜೆಪಿ ವಕ್ತಾರ ಅರುಣ್ ಜಿ ಶೆಟ್ ಹೇಳಿದರು ಅವರು ಭಾರತೀಯ ಜನತಾ ಪಾರ್ಟಿ ಮೂಲ್ಕಿ ಮೂಡಬಿದ್ರೆ ಮಂಡಲ ವತಿಯಿಂದ ರಾಜ್ಯ ಕಾಂಗ್ರೇಸ್ ಸರಕಾರದ ಜನ ವಿರೋಧಿ ನೀತಿಗಳನ್ನು ಖಂಡಿಸಿ
ಕಿನ್ನಿಗೋಳಿ ಪಟ್ಟಣ ಪಂಚಾಯತ್ ಮುಂಭಾಗ ನಡೆದ ಪ್ರತಿಭನೆಯಲ್ಲಿ ಮಾತನಾಡಿ, ರಾಜ್ಯವನ್ನು ಕಾಂಗ್ರೇಸ್ ಸರಕಾರ ಎ.ಟಿ.ಎಂ ಆಗಿ ಪರಿವರ್ತಿಸಿದ್ದು ಖುದ್ದು ಸಿದ್ದರಾಮಯ್ಯನವರೇ ಪತ್ನಿಯ ಹೆಸರಲ್ಲಿ ಸರಕಾರಿ ಸೈಟ್ ಗಿಟ್ಟಿಸುವ ಮೂಲಕ ಬ್ರಷ್ಟಾಚಾರದಲ್ಲಿ ತೊಡಗಿದ್ದು ರಾಜ್ಯದ ಜನತೆಗೆ ಗೊತ್ತಿದೆ, ಮೂಡ ಹಗರಣ, ವಸತಿ ಹಗರಣ ಹೀಗೆ ನಾನಾ ಹಗರಣಗಳಲ್ಲಿ ತೊಡಗಿಸಿಕೊಂಡಿದ್ದು, ಅಭಿವೃದ್ದಿ ಮಾತ್ರ ಶೂನ್ಯವಾಗಿದೆ, ಅವರು ಕೊಟ್ಟ ಗ್ಯಾರಂಇಗಳನ್ನು ಅವರಿಗೆ ಪೂರೈಸಲು ಅಸಾದ್ಯವಾಗಿದೆ ಎಂದರು.
. ಈ ಸಂದರ್ಭ ಬಿಜೆಪಿ ಮುಖಂಡರಾದ ಈಶ್ವರ್ ಕಟೀಲ್, ಭುವನಾಭಿರಾಮ ಉಡುಪ, ಕಸ್ತೂರಿ ಪಂಜ, ಸೋಂದ ಬಾಸ್ಕರ ಭಟ್,ಅಭಿಲಾಷ್ ಶೆಟ್ಟಿ ಕಟೀಲು, ದಿವಾಕರ ಕರ್ಕೇರ, ಪ್ರವೀಣ್ ಕಟೀಲು, ಅರುಣ್ ಮಲ್ಲಿಗೆಯಂಗಡಿ, ಕೇಶವ ಕರ್ಕೇರ, ಲೊಕಯ್ಯ ಸಾಲಿಯಾನ್, ಹೆಮಲತಾ,
ಶೈಲೇಶ್ ಅಂಚನ್, ಉಮಾನಾಥ್, ಚರಣ್ ಕಟೀಲು, ವರುಣ್ ಶೇಡಿಗಾರ್, ಅಶೋಕ್ ಕೆಮ್ಮಡೆ, ಸುಧೀರ್ ಪಟ್ಟೆ,
ಬೇಬಿ ಕೆಮ್ಮಡೆ, ಬಾಸ್ಕರ ಪೂಜಾರಿ, ಪ್ರೇಮ್ ರಾಜ್ ಶೆಟ್ಟಿ ಬರ್ಕೆ, ತಿಲಕ್ ರಾಜ್ ಶೆಟ್ಟಿ,ಕಪಿಲ ಗುತ್ತಕಾಡ್ ಜಯನಂದ ಮೂಲ್ಕಿ, ಚಂದ್ರಶೇಖರ ಬರ್ಕೆ, ದಯಾನಂದ ಶೆಟ್ಟಿ ಕೆ.ಜಿ.ಬೆಟ್ಟು, ಸಂಜಯ್ ಕೆಮ್ಮಡೆ, ದುರ್ಗಾಪ್ರಸಾದ್ ಶೆಟ್ಟಿ, ಆಶಾ ಸುವರ್ಣ ಮತ್ತಿತರರು ಇದ್ದರು