ಭಾರೀ ಮಳೆ,ಕೃಷಿ ಭೂಮಿ ಹಾಗೂ ಮನೆಗಳು ಜಲಾವೃತ್ತ
Monday, June 16, 2025
ಕಿನ್ನಿಗೋಳಿ :ಎಡೆಬಿಡದೆ ಸುರಿದಂತಹ ಭಾರೀ ಮಳೆಗೆ ಕಟೀಲು ನಂದಿನಿ ನದಿಯು ಉಕ್ಕಿ ಹರಿಯುತ್ತಿದ್ದು,ಉಕ್ಕಿ ಹರಿದ ಪರಿಣಾಮ ಹಲವೆಡೆ ಜಲಾವೃತ್ತ ವಾಗಿದೆ.ಪಕ್ಷಿಕೆರೆಯ ಕೆಮ್ರಾಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಂಜ,ಬೈಲಗುತ್ತು,ಉಲ್ಯ, ಪರಿಸರದಲ್ಲಿ ಕೃಷಿ ಪ್ರದೇಶಗಳು ಸಂಪೂರ್ಣ ಜಲಾವೃತ್ತಗೊಂಡಿದೆ.20 ಮನೆಗಳು ಜಲಾವೃತ್ತ ಗೊಂಡಿದೆ.ಪಕ್ಷಿಕೆರೆಯಿಂದ ಪಂಜ - ಮಧ್ಯ ಸಂಪರ್ಕ ರಸ್ತೆ ಮುಳುಗಡೆಯಾಗಿದೆ.ಪಂಜ ಮಧ್ಯ ರಸ್ತೆಯ ಇಲ್ಲಿನ ಸೇತುವೆಯ ಮೇಲೆ ನೀರು ಹರಿಯುತ್ತಿದ್ದು,ವಾಹನಗಳ ಸಂಚಾರ ಸ್ತಗಿತಗೊಂಡಿದೆ.ಉಲ್ಯ - ಕೊಯಿಕುಡೆ ಸಮೀಪವೂ ಹಲವೆಡೆ ಕೃಷಿ ಭೂಮಿಗಳು ಜಲಾವೃತ್ತ ಗೊಂಡಿದ್ದು,ಸಮೀಪದ ಧೂಮಾವತಿ ದೇವಸ್ಥಾನಕ್ಕೂ ನೀರು ನುಗ್ಗಿದೆ.