Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಕಿಲೆಂಜಾರು ಅರಮನೆ ಸರ್ಕಾರಿ ಪ್ರೌಢಶಾಲೆ, ವನಮಹೋತ್ಸವ ಕಾರ್ಯಕ್ರಮ

ಕೈಕಂಬ:ಪರಿಸರವನ್ನು ಉಳಿಸಿ ಬೆಳೆಸಲು ನಾವೆಲ್ಲರೂ ಪರಿಸರ ಸೇನಾನಿಗಳಾಗಬೇಕು ಎಂದು ಪ್ರಗತಿಪರ ಕೃಷಿಕ ಹಾಗೂ ಹಸಿರು ಸೇನೆ ಸಂಘಟನೆಯ ಮುಖಂಡ  ಮನೋಹರ ಶೆಟ್ಟಿ ಹೇಳಿದರು.ಅವರು ನೇಸರ ಇಕೋ ಕ್ಲಬ್ ವತಿಯಿಂದ ಕಿಲೆಂಜಾರು ಅರಮನೆ ಸರ್ಕಾರಿ ಪ್ರೌಢಶಾಲೆ ಕುಪ್ಪೆಪದವು ಇಲ್ಲಿ ನಡೆದ ವನಮಹೋತ್ಸವ ಕಾರ್ಯಕ್ರಮದಲ್ಲಿ ಗಿಡವನ್ನು ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.   

ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷ  ಸುಧೀರ್  ಜೈನ್, ಮಾಜಿ ಅಧ್ಯಕ್ಷ  ಶೇಖ್ ಅಬ್ದುಲ್ಲಾ,  ಶಶಿಧರ್ ಶೆಟ್ಟಿ, ಮುಖ್ಯ ಶಿಕ್ಷಕ  ಬಾಬು ಪಿ.ಎಂ., ಶಿಕ್ಷಕರಾದ  ಮಾರ್ಕ್ ಮೆಂಡೊನ್ಸಾ,  ಉದಯ ಕುಮಾರ್  ಹಾಗೂ  ವಿದ್ಯಾರ್ಥಿಗಳು ಉಪಸ್ಥಿತರಿದ್ದರು.