ಹತ್ಯೆಯಾದ ಅಶ್ರಫ್ ,ರಹೀಮಾನ್ ಕುಟುಂಬಕ್ಕೆ ಸರಕಾರದಿಂದ ಪರಿಹಾರ ನೀಡಬೇಕು,ಸಚಿವರಿಗೆ ಮನವಿ
Thursday, June 19, 2025
ಮಂಗಳೂರು:ದುಷ್ಕರ್ಮಿಗಳಿಂದ ಹತ್ಯೆಯಾದ ಅಮಾಯಕ ಅಶ್ರಫ್ ವಯನಾಡ್ ಮತ್ತು ರಹಿಮಾನ್ ಕೊಳ್ತಮಜಲ್ ರವರ ಕುಟುಂಬಕ್ಕೆ ಸರಕಾರದಿಂದ ಸೂಕ್ತ ಪರಿಹಾರ ನೀಡ ಬೇಕು,ಕೊಲೆಯ ಹಿಂದೆ ಇರುವ ನೈಜ ಆರೋಪಿಗಳನ್ನು ಯುಎಪಿಎ ಕಾನೂನಿಗೊಳಪಡಿಸಿ ಕೂಡಲೇ ಬಂಧಿಸಬೇಕು.
ತಾವುಗಳು ಶೀಘ್ರವೇ ಜಿಲ್ಲೆಗೆ ಆಗಮಿಸಿ ಶಾಂತಿ ಸಭೆ ನಡೆಸಿ ಅಲ್ಪಸಂಖ್ಯಾತರಿಗೆ ದೈರ್ಯ ತುಂಬುವ ಕೆಲಸ ಮಾಡಬೇಕು
ಎಂದು ದ.ಕ ಜಿಲ್ಲಾ ಕಾಂಗ್ರೆಸ್ ಮುಖಂಡರಿಂದ ಕೆಪಿಸಿಸಿ ಅಧ್ಯಕ್ಷ ,ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ರವರ ನೇತೃತ್ವದಲ್ಲಿ ಸಚಿವ ಝಮೀರ್ ಅಹಮದ್ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ರವರಿಗೆ ಮನವಿಯನ್ನು ನೀಡಿದರು.
ಈ ಸಂದರ್ಭದಲ್ಲಿ ಶಾಸಕರಾದ ಯಾಸಿರ್ ಪಠಾಣ್ , ಬಲ್ಕಿಶ್ ಬಾನು ,ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸಾಹುಲ್ ಹಮೀದ್ ಕೆ.ಕೆ ,ಜಿಲ್ಲಾ ಕೋಶಾಧಿಕಾರಿ ಮೊಹಮದ್ ಬಪ್ಪಳಿಗೆ,ದ.ಕ ಮುಸ್ಲಿಂ ಜನಪ್ರತಿನಿಧಿಗಳ ಒಕ್ಕೂಟದ ಅಧ್ಯಕ್ಷ ಸಿರಾಜ್ ಬಜ್ಪೆ ,ಡಿಸಿಸಿ ಪ್ರಧಾನ ಕಾರ್ಯದರ್ಶಿ ಶಬೀರ್ ಸಿದ್ದಕಟ್ಟೆ ,ಮುಡಾ ಸದಸ್ಯ ಜಲೀಲ್(ಅದ್ದು ),
ಕೆಪಿಸಿಸಿ ಅಲ್ಪಸಂಖ್ಯಾತ
ವಿಭಾಗದ ಕಾರ್ಯದರ್ಶಿ ಶಮೀರ್ ಕಾಟಿಪಳ್ಳ ,ಮುಸ್ಲಿಂ ಐಕ್ಯತೆ ವೇದಿಕೆಯ ಅಧ್ಯಕ್ಷ ಅಶ್ರಫ್ ಬದ್ರಿಯಾ ,ಜಿಲ್ಲಾ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ
ಅಬೂಬಕ್ಕರ್ ಐಡಿಯಲ್ ,
ಸಂಘಟನಾ ಕಾರ್ಯದರ್ಶಿ ಇಬ್ರಾಹಿಂ ಶಾಯಿರ್ ಅಬ್ಬಾಸ್ ,
ಜಿಲ್ಲಾ ಅರೋಗ್ಯ ಸಮಿತಿಯ ಸದಸ್ಯ ಕರೀಂ ಗೇರುಕಟ್ಟೆ ,ದಕ್ಷಿಣ ಕನ್ನಡ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಬೀಬ್ ಕಣ್ಣೂರು ,ಬೆಳ್ತಂಗಡಿ ತಾಲೂಕು ಅಕ್ರಮ ಸಕ್ರಮ ಸಮಿತಿ ಸದಸ್ಯ ಅಯೂಬ್ ಡಿ.ಕೆ ,ಕಾಜೂರು ದರ್ಗಾ ಸಮಿತಿಯ ಕಾರ್ಯದರ್ಶಿ ಕಾಂಗ್ರೆಸ್ ಮುಖಂಡರಾದ ಸಿದ್ದಿಕ್ ,ಜಲೀಲ್ ಕೃಷ್ಣಾಪುರ,ಸುಲೈಮಾನ್ ಕರಾಯ ಹಾಗೂ ಮೊದಲಾದವರು ಹಾಜರಿದ್ದರು.