-->
ಸರಕಾರಿ ಪ್ರೌಢ ಶಾಲೆ ಬಡಗ ಎಕ್ಕಾರು  ವಿಜ್ಞಾನ ಸಂಘದ ವತಿಯಿಂದ " ಒಂದು ದಿನ ವಿಜ್ಞಾನಿಯಾಗಿ" ಕಾರ್ಯಕ್ರಮ

ಸರಕಾರಿ ಪ್ರೌಢ ಶಾಲೆ ಬಡಗ ಎಕ್ಕಾರು ವಿಜ್ಞಾನ ಸಂಘದ ವತಿಯಿಂದ " ಒಂದು ದಿನ ವಿಜ್ಞಾನಿಯಾಗಿ" ಕಾರ್ಯಕ್ರಮ

ಬಜಪೆ:ಪ್ರಧಾನಿ ನರೇಂದ್ರ  ಮೋದಿಯವರು ತಮ್ಮ 119ನೇ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ತಿಳಿಸಿದಂತೆ ಪ್ರತಿ ಶಾಲೆಗಳಲ್ಲಿ "One Day as a Scientist" ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಸರಕಾರಿ ಪ್ರೌಢ ಶಾಲೆ ಬಡಗ ಎಕ್ಕಾರು  ವಿಜ್ಞಾನ ಸಂಘದ ವತಿಯಿಂದ " ಒಂದು ದಿನ ವಿಜ್ಞಾನಿಯಾಗಿ" ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳು  ಶ್ರೀ ದುರ್ಗಾ ಕ್ಯಾಪ್ಸ್ ಫೌಂಡೇಶನ್ ಸೈನ್ಸ್ ಪಾರ್ಕ್ ಕಟೀಲು ಇಲ್ಲಿಗೆ ಭೇಟಿ ನೀಡಿದರು. ಈ ವೇಳೆ ವಿಜ್ಞಾನ ಸಂಘದ ಸಂಚಾಲಕಿ ಶ್ರೀಮತಿ ರಾಜಶ್ರೀ , ಶಿಕ್ಷಕರಾದ ರಮ್ಯಾ , ವಿದ್ಯಾಲತಾ, ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ರಾಜಶೇಖರ್, ವಿಜ್ಞಾನ ಶಿಕ್ಷಕ ಹರೀಶ್  ಉಪಸ್ಥಿತರಿದ್ದರು.

ಸೈನ್ಸ್ ಪಾರ್ಕಿನ ಉಸ್ತುವಾರಿ ಕೇಶವ್ ಅವರು  ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಕೌತುಕಗಳ ಬಗ್ಗೆ ಮಾಹಿತಿಯನ್ನು ನೀಡಿ  ವಿದ್ಯಾರ್ಥಿಗಳ ಸಂದೇಹಗಳನ್ನು ಪರಿಹರಿಸಿದರು.

ಬಡಗ ಎಕ್ಕಾರು ಸರಕಾರಿ ಪ್ರೌಢಶಾಲೆಯಲ್ಲಿ  ವಿಜ್ಞಾನ ಕ್ಷೇತ್ರದ ಪ್ರೀತಿ ಮತ್ತು ಆಸಕ್ತಿಯನ್ನು ಬೆಳೆಸುವ ಉದ್ದೇಶದಿಂದ "ಒಂದು ದಿನ ವಿಜ್ಞಾನಿಯಾಗಿ" ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವಿಜ್ಞಾನಿಗಳಂತೆ ಆಲೋಚಿಸಿ, ಪ್ರಯೋಗಮೂಲಕ ಜ್ಞಾನವನ್ನು ಅಭ್ಯಾಸ ಮಾಡುವ ಅವಕಾಶವನ್ನು ಪಡೆದುಕೊಂಡರು.

ವಿದ್ಯಾರ್ಥಿಗಳು ವಿಭಿನ್ನ ವಿಜ್ಞಾನಿಕ ತಜ್ಞರ ಪಾತ್ರವನ್ನು ವಹಿಸಿ ಪ್ರಹಸನಗಳನ್ನು ಮಾಡಿದರು, ವೈಜ್ಞಾನಿಕ ಉಪಕರಣಗಳನ್ನು ಬಳಸುವ ತರಬೇತಿ ಪಡೆದರು. ಲ್ಯಾಬೊರೇಟರಿ ಪರೀಕ್ಷೆಗಳು, ಸರಳ ವಿಜ್ಞಾನ ಪ್ರಾಯೋಗಿಕ ತೋರಿಕೆಗಳು, ಮಾದರಿ ತಯಾರಿಕೆ ಮತ್ತು ಹೊಸ ಆವಿಷ್ಕಾರಗಳ ಪರಿಚಯದ ಮೂಲಕ, ವಿಜ್ಞಾನ ಕ್ಷೇತ್ರದ ಮಹತ್ವವನ್ನು ತಮ್ಮ ಅನುಭವದ ಮೂಲಕ ಅರಿತುಕೊಳ್ಳುವಂತಾಯಿತು.
ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಕುತೂಹಲ, ವಿಶ್ಲೇಷಣಾತ್ಮಕ ಚಿಂತನೆ ಹಾಗೂ ಹೊಸತನದ ಅರಿವು ಉಂಟುಮಾಡಿತು. ಸಂಸ್ಥೆಯ ಹಿರಿಯ ಶಿಕ್ಷಕಿ ಶ್ರೀಮತಿ ಪೂರ್ಣಿಮಾ ವಿದ್ಯಾರ್ಥಿಗಳಿಗೆ ಭೌತಶಾಸ್ತ್ರದ ಪ್ರಾಯೋಗಿಕ ಅನ್ವಯಗಳನ್ನು ಸರಳ ಪ್ರಯೋಗದ ಮೂಲಕ ತಿಳಿಸಿದರು. ವಿಜ್ಞಾನ ಸಂಘದ ಅಧ್ಯಕ್ಷ್ಯೆ ಕುಮಾರಿ ರುತ್ ಮರಿಯ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ವಿದ್ಯಾರ್ಥಿನಿ ಸಾನ್ವಿಕ ಶೆಟ್ಟಿ, ಧನ್ಯವಾದವಿತ್ತರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ