ಶಾಲಾ ಸಂಸತ್ ಹಾಗೂ ವಿವಿಧ ಸಂಘಗಳ ಉದ್ಘಾಟನಾ ಕಾರ್ಯಕ್ರಮ
Tuesday, June 24, 2025
ಬಜಪೆ:ಜಗತ್ತಿನ ಅತಿ ಹೆಚ್ಚು ಜನಸಂಖ್ಯೆಯುಳ್ಳ ಪ್ರಜಾಪ್ರಭುತ್ವ ರಾಷ್ಟ್ರ ಭಾರತದ ಭವಿಷ್ಯ ಉಜ್ವಲವಾಗಬೇಕಾದರೆ ಮುಂದಿನ ಪ್ರಜೆಗಳಾದ ಇಂದಿನ ಮಕ್ಕಳು ಪಠ್ಯದೊಂದಿಗೆ ಪ್ರಜಾಪ್ರಭುತ್ವದ ಮೂಲ ಸತ್ವಗಳನ್ನು - ತತ್ವಗಳನ್ನು ಎಳೆಯ ವಯಸ್ಸಿನಲ್ಲೆ ಮೈಗೂಡಿಸಿಕೊಂಡು ಬೆಳೆಯುವುದು ಅಗತ್ಯ. ಈ ನಿಟ್ಟಿನಲ್ಲಿ ಸರಕಾರಿ ಪ್ರೌಢಶಾಲೆ ಬಡಗ ಎಕ್ಕಾರಿನಲ್ಲಿ ವಿದ್ಯಾರ್ಥಿಗಳಿಗೆ ನೈಜ ಮತ ಯಂತ್ರದ ಅನುಭವ ಕಟ್ಟಿಕೊಡುವಂತೆ ಚುನಾವಣೆ ನಡೆಸಲಾಗಿದೆ. ಶಾಲಾ ಸಂಸತ್ ನಲ್ಲಿ ವಿವಿಧ ಇಲಾಖೆಗಳ ಮಂತ್ರಿಗಳಾಗಿ ತಮ್ಮ ಹುದ್ದೆಗಳ ಜವಾಬ್ದಾರಿಯನ್ನು ನಿರ್ವಹಿಸುವ ಅವಕಾಶ ಮಕ್ಕಳು ಪಡೆದಿದ್ದಾರೆ. ಅವರಲ್ಲಿರುವ ಪ್ರತಿಭೆಗಳು ಬೆಳಕು ಕಾಣಲು ನೂರಾರು ಅವಕಾಶಗಳ ಹೆಬ್ಬಾಗಿಲನ್ನು ತೆರೆಯಲು ಶಾಲಾ ಸಂಸತ್ ಹಾಗೂ ವಿವಿಧ ಸಂಘಗಳ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಳ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಉಮೇಶ್ ರಾವ್ ಎಕ್ಕಾರು ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಶಾಲೆ ಎಂಬುದು ನಾಲ್ಕು ಗೋಡೆಗಳ ಒಳಗೆ ಕೇವಲ ಪಠ್ಯ ವಿಚಾರಗಳನ್ನು ದಾಟಿಸುವ ಸ್ಥಳವಲ್ಲ. ವಿದ್ಯಾರ್ಥಿಗಳನ್ನು ಜೀವನ್ಮುಖಿಯಾಗಿ ಸಕಲ ಸವಾಲುಗಳನ್ನು ಆತ್ಮವಿಶ್ವಾಸದಿಂದ ಎದುರಿಸಬಲ್ಲ ಭವಿಷ್ಯದ ಪ್ರಜೆಗಳಾಗಿ, ಭಾರತದ ಭಾವೀ ನಿರ್ಮಾತ್ರುಗಳಾಗಿ ಬೆಳೆಸುವ ಹೊಣೆಗಾರಿಕೆಯನ್ನು ಯಶಸ್ವಿಯಾಗಿ ನಡೆಸುವ ಸಂಸ್ಥೆ. ಶಾಲೆಯ ವಿದ್ಯಾರ್ಥಿಗಳು
ಶಾಲಾ ಸಂಸತ್ ಮುನ್ನಡೆಸುವ ಹೊಣೆಗಾರಿಕೆಯನ್ನು ಕೈಗೆತ್ತಿಕೊಳ್ಳುವ ಸಲುವಾಗಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನೆರವೇರಿತು.
ಸೃಷ್ಟಿ ಶೆಟ್ಟಿ 10ನೇ ತರಗತಿ ಮುಖ್ಯಮಂತ್ರಿಯಾಗಿ,
ಸಾನ್ವಿಕ ಶೆಟ್ಟಿ ಸಭಾಪತಿಯಾಗಿ,
ಭೂಮಿಕಾ ಹೆಗ್ಡೆ ಕ್ರೀಡಾ ಮಂತ್ರಿಯಾಗಿ,ಅಪ್ಸನಾ ಬಾನು ಶಿಕ್ಷಣ ಮತ್ತು ವಾರ್ತಾ ಮಂತ್ರಿಯಾಗಿ,
ಕೀರ್ತನ್ ತೋಟಗಾರಿಕಾ ಮಂತ್ರಿಯಾಗಿ,
ಜೋಶ್ವ ಸ್ವಚ್ಛತಾ ಮಂತ್ರಿಯಾಗಿ,
ಪವನ್ ನೀರಾವರಿ ಮಂತ್ರಿಯಾಗಿ,
ಸೃಜನ್ ಅಮೀನ್ ಗೃಹ ಮಂತ್ರಿಯಾಗಿ,
ಪೃಥ್ವಿನ್ ಶೆಟ್ಟಿ ಆಹಾರ ಮಂತ್ರಿಯಾಗಿ,
ನಂದೀಶ್ ಆರೋಗ್ಯ ಮಂತ್ರಿಯಾಗಿ,ಛಾಯಾಶ್ರೀ ಸಾಂಸ್ಕೃತಿಕ ಮಂತ್ರಿಯಾಗಿ ಹಾಗೂ ವಿನೀತ್ ಸುವರ್ಣ ವಿರೋಧ ಪಕ್ಷದ ನಾಯಕನಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಶಾಲಾ ವಿದ್ಯಾರ್ಥಿಗಳಿಗೆ ಅವರ ಪ್ರತಿಭೆಗಳ ಅನಾವರಣಕ್ಕಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸುವ, ಅವರಲ್ಲಿ ಕಲೆ, ಸಂಸ್ಕೃತಿ, ಪರಿಸರದ ಹಾಗೂ ಪ್ರಜಾಪ್ರಭುತ್ವದ ಅರಿವು ತುಂಬುವ, ಗ್ರಾಹಕರಾಗಿ ವಹಿಸಬೇಕಾದ ಎಚ್ಚರಗಳ ಬಗ್ಗೆ ತಿಳಿಸುವ ವಿವಿಧ ಸಂಘಗಳಿವೆ. ಈ
ವಿವಿಧ ಸಂಘಗಳ ಉದ್ಘಾಟನೆಯನ್ನು
ಎಲ್ಲಾ ಸಂಘಗಳ ಕಡತಗಳನ್ನು ಸಂಘದ ಜವಾಬ್ದಾರಿ ಹೊತ್ತ ವಿದ್ಯಾರ್ಥಿಗಳಿಗೆ ವಿತರಿಸುವ ಮೂಲಕ ಬಜಪೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನ ನಿವೃತ್ತ ಪ್ರಬಂಧಕ ರತ್ನಾಕರ ಶೆಟ್ಟಿ ಅವರು ಉದ್ಘಾಟಿಸಿದರು.
ಮತದಾರರ ಸಾಕ್ಷರತಾ ಸಂಘದ ಕೃತಿಕಾ ,ವಿಜ್ಞಾನ ಸಂಘದ ರುತ್ ಮರಿಯ, ಇಕೋ ಕ್ಲಬ್ ನ ವೈ.ಸುಹಾಸ್ ಭಟ್, ಇತಿಹಾಸ ಸಂಘದ ಯಜ್ಞೇಶ್, ಚಿತ್ರಕಲಾ ಸಂಘದ ನಂದೇಶ್,
ಭಾಷಾ ಸಂಘದ ಸಿಯೋನ್ ಮಿರಾಂದ,ಗ್ರಾಹಕರ ಸಂಘದ ತಿಲಕ್, ಮಕ್ಕಳ ಹಕ್ಕುಗಳ ಸಂಘದ ರೇಷ್ಮಾ, ಕ್ರೀಡಾ ಸಂಘದ ಭೂಮಿಕಾ ಹೆಗ್ಡೆ, ಇಂಟರ್ಯಾಕ್ಟ್ ಸಂಘದ ಛಾಯಾಶ್ರೀ ತಮ್ಮ ಸಂಘದ ಕಡತಗಳನ್ನು ಉದ್ಘಾಟಕರಿಂದ ಸ್ವೀಕರಿಸಿ ಪ್ರಸ್ತುತ ವರ್ಷದ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡರು.
ಮತದಾರರ ಸಾಕ್ಷರತಾ ಸಂಘದ - ಸಾನ್ವಿ,ವಿಜ್ಞಾನ ಸಂಘದ ಮೌಲ್ಯ,ಇಕೋ ಕ್ಲಬ್ ನ ಸುಜನ್,ಇತಿಹಾಸ ಸಂಘದ ವರ್ಷಾ ಎಸ್. ಪೂಜಾರಿ,ಚಿತ್ರಕಲಾ ಸಂಘದ ವಿದ್ಯಾ,ಭಾಷಾ ಸಂಘದ ಅಪ್ಸನಾ ಬಾನು,ಗ್ರಾಹಕ ಸಂಘದ ಸೃಜನ್ ಶೆಟ್ಟಿ ಕಾರ್ಯದರ್ಶಿಗಳ ನೆಲೆಯಲ್ಲಿ ತಮ್ಮ ಸಂಘಗಳ ಧ್ಯೇಯಗಳು, ಸಾಧನೆಗಳು ಹಾಗೂ ಪ್ರಸ್ತುತ ವರ್ಷದ ಕಾರ್ಯ ಸೂಚಿಯನ್ನು ಸಭೆಯಲ್ಲಿ ಪ್ರಸ್ತುತ ಪಡಿಸಿದರು.
ಅಧಿಕಾರ ಸ್ವೀಕರಿಸಿದ ವಿದ್ಯಾರ್ಥಿಗಳನ್ನು ಈ ವೇಳೆ ಅಭಿನಂದಿಸಲಾಯಿತು. ವಿದ್ಯಾರ್ಥಿ ಸಂಸತ್ ಹಾಗೂ ವಿವಿಧ ಸಂಘಗಳಾದ ಗ್ರಾಹಕರ ಸಂಘ, ಇಕೋ ಕ್ಲಬ್, ವಿಜ್ಞಾನ ಸಂಘ, ಭಾಷಾ ಸಂಘ, ಮತದಾರರ ಸಾಕ್ಷಾರತಾ ಸಂಘ ಗಳು ವಿದ್ಯಾರ್ಥಿಗಳಲ್ಲಿ ಅವಕಾಶ ಗಳನ್ನು ನೀಡಿ, ಆತ್ಮವಿಶ್ವಾಸ ತುಂಬಿ ಬೆಳೆಸುವ ಬಗೆಯನ್ನು ತಮ್ಮ ಬಾಲ್ಯದ ಉದಾಹರಣೆ ನೀಡಿ ಮನದಟ್ಟು ಮಾಡಿಸಿದರು.
2024-25ನೇ ಸಾಲಿನ ಎಸ್. ಎಸ್. ಎಲ್. ಸಿ. ಶಾಲಾ ಹಂತದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿ ದರ್ಶಿನಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಸುದೀಪ್ ಅಮೀನ್ ಶಾಲೆಯ ಶಿಕ್ಷಕರ ಪರಿಶ್ರಮ ಹಾಗೂ ವಿದ್ಯಾರ್ಥಿಗಳ ರಾಷ್ಟ್ರಮಟ್ಟದ ಕ್ರೀಡಾ ಸಾಧನೆ ಹಾಗೂ 100% ಫಲಿತಾಂಶ ಶಾಲೆಯ ಹಾಗೂ ಎಕ್ಕಾರು ಗ್ರಾಮದ ಕೀರ್ತಿ ಹೆಚ್ಚಿಸಿದ್ದನ್ನು ಸ್ಮರಿಸಿ ಅಭಿನಂದಿಸಿ ವಿಧ್ಯಾರ್ಥಿಗಳಿಗೆ ಶುಭಹಾರೈಸಿದರು.
ಎಕ್ಕಾರು ಗ್ರಾಮ ಪಂಚಾಯತ್ ಅರಿವು ಕೇಂದ್ರದ ಗ್ರಂಥ ಪಾಲಕಿ ಹೇಮಲತಾ,ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸದಸ್ಯರಾದ ರತನ್ ಕುಮಾರ್, ಶ್ಯಾಮಲಾ, ಲತಾ,ಬಾನು, ಶಾಲೆಯ ಮುಖ್ಯ ಶಿಕ್ಷಕಿ ಇಂದಿರಾ ಎನ್ ರಾವ್, ಶಿಕ್ಷಕರಾದ ಪೂರ್ಣಿಮ ಹೆಚ್. ಎಂ., ಜ್ಯೋತಿ ಬಿ.,ರಾಜಶ್ರೀ ಕೆ., ರಮ್ಯ ಕೆ., ವಿದ್ಯಾಲತಾ, ವಿನ್ನಿ ನಿರ್ಮಲ ಡಿಸೋಜ, ಜಯಂತಿ ಎಂ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಶಿಕ್ಷಕರಾದ ವಿದ್ಯಾಗೌರಿ ಎಂ. ಕೆ. ಸ್ವಾಗತಿಸಿದರು, ಡಾ. ಅನಿತ್ ಕುಮಾರ್ ವಂದಿಸಿದರು ಹಾಗೂ ಚಿತ್ರಾಶ್ರೀ ಕೆ. ಎಸ್. ಕಾರ್ಯಕ್ರಮ ನಿರೂಪಿಸಿದರು.