ಎಕ್ಕಾರು ಗ್ರಾ.ಪಂ ನ ಅರಿವು ಕೇಂದ್ರದ ನೂತನ ಕಟ್ಟಡ ಉದ್ಘಾಟನೆ,ಎಕ್ಕಾರು ಗ್ರಾ.ಪ ನ ಕಚೇರಿಯ ನೂತನ ಕಟ್ಟಡಕ್ಕೆ ಶಿಲಾನ್ಯಾಸ
Monday, June 16, 2025
ಬಜಪೆ:ಪುಸ್ತಕಗಳನ್ನು ಓದುವುದು ಜ್ಞಾನಾರ್ಜನೆ,ಮನರಂಜನೆ ಮತ್ತು ವ್ಯಕ್ತಿತ್ವ ವಿಕಾಸಕ್ಕೆ ಅತ್ಯಂತ ಉಪಯುಕ್ತವಾದ ಚಟುವಟಿಕೆಯಾಗಿದೆ.ಮಾತ್ರವಲ್ಲದೆ ಭಾಷಾಜ್ಞಾನವನ್ನು ಹೆಚ್ಚಿಸಲು ಸಾಧ್ಯವಿದೆ ಎಂದು ಮೂಲ್ಕಿ ಮೂಡಬಿದಿರೆ ವಿಧಾನ ಸಭಾ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.ಅವರು ಸೋಮವಾರದಂದು ಎಕ್ಕಾರು ಗ್ರಾ.ಪಂ ನ ಅರಿವು ಕೇಂದ್ರದ ನೂತನ ಕಟ್ಟಡ ಉದ್ಘಾಟಿಸಿ,ಎಕ್ಕಾರು ಗ್ರಾ.ಪ ನ ಕಚೇರಿಯ ನೂತನ ಕಟ್ಟಡಕ್ಕೆ ಶಿಲಾನ್ಯಾಸವನ್ನು ನೆರವೇರಿಸಿ ಮಾತನಾಡಿದರು.
ಈ ಸಂದರ್ಭ ಎಕ್ಕಾರು ಗ್ರಾ.ಪಂ ಅಧ್ಯಕ್ಷ ಪ್ರವೀಣ್ ಆಚಾರ್ಯ,ಉಪಾಧ್ಯಕ್ಷೆ ಶ್ರೀಮತಿ ಪದ್ಮಾಕ್ಷಿ ,ಮಂಗಳೂರು ತಾ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹೇಶ್ ಕುಮಾರ್ ಹೊಳ್ಳ,ವಿಧಾನ ಪರಿಷತ್ ಶಾಸಕ ಕಿಶೋರ್ ಬಿ.ಅರ್,ಎಕ್ಕಾರು ಗ್ರಾ.ಪಂ ಪಿಡಿಓ ರಾಜೇಂದ್ರ ಶೆಟ್ಟಿ,ಎಕ್ಕಾರು ಗ್ರಾ.ಪಂ ಕಾರ್ಯದರ್ಶಿ ಕಮಲಾಕ್ಷ,ಜಿ.ಪಂ ಇಂಜಿನಿಯರ್ ಪ್ರಶಾಂತ್ ಆಳ್ವ,ಗುತ್ತಿಗೆದಾರ ವಿ.ಕಣ್ಣನ್ ,ದ.ಕ ಜಿಲ್ಲಾ ಮುಖ್ಯಗ್ರಂಥಾಲಯಾಧಿಕಾರಿ ಶ್ರೀಮತಿ ಗಾಯತ್ರಿ
ಬಡಗ ಎಕ್ಕಾರು ಸರಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಇಂದಿರಾ ಎನ್ .ರಾವ್ ,ಗ್ರಂಥಪಾಲಕಿ ಹೇಮಲತಾ ಶರ್ಮಾ,ಗ್ರಾ.ಪಂ ಸದಸ್ಯರುಗಳಾದ ವಿಕ್ರಂ ಮಾಡ,ಸತೀಶ್ ಶೆಟ್ಟಿ,ಸುಜಾತ,ಸುರೇಖಾ ಶೆಟ್ಟಿ,ಮೊಯ್ದಿನ್ ಖಾನ್ ,ಜಾನಕಿ,ನಸೀಮಾ,ಸುದೀಪ್ ಅಮೀನ್ ,ಪ್ರಮುಖರಾದ ಪದ್ಮನಾಭ ಭಟ್,ರತ್ನಾಕರ ಶೆಟ್ಟಿ,ರಾಮ ಶೆಟ್ಟಿಗಾರ್,ಆದರ್ಶ್ ಶೆಟ್ಟಿ,ದಿನೇಶ್ ಕುಕ್ಯಾನ್ ,ರಿತೇಶ್ ಶೆಟ್ಟಿ,ಸ್ಟ್ಯಾನೀ ಮಿರಾಂದ,ಗ್ರಾ.ಪಂ ನ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.