-->

ಕಟೀಲು ವರ್ಷಾವಧಿ ಜಾತ್ರೆ

ಕಟೀಲು ವರ್ಷಾವಧಿ ಜಾತ್ರೆ
ಎ.13 ರಿಂದ ಎ.20 ರವರೆಗೆ ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರೆ
ಕಾರಣಿಕ ಕ್ಷೇತ್ರ ಹರಿಯಾಳ ಸಾನದಗುಡ್ಡೆಯಲ್ಲಿ ಎ.14 ರಿಂದ ಎ. 17 ರವರೆಗೆ ಬ್ರಹ್ಮಕಲಶೋತ್ಸವ ಸಂಭ್ರಮ

ಕಾರಣಿಕ ಕ್ಷೇತ್ರ ಹರಿಯಾಳ ಸಾನದಗುಡ್ಡೆಯಲ್ಲಿ ಎ.14 ರಿಂದ ಎ. 17 ರವರೆಗೆ ಬ್ರಹ್ಮಕಲಶೋತ್ಸವ ಸಂಭ್ರಮ

ಕಿನ್ನಿಗೋಳಿ:ಅತ್ಯಂತ ಕಾರಣಿಕ ಮತ್ತು ವಿಶೇಷತೆ ಹೊಂದಿರುವ ಹರಿಯಾಳ ಸಾನದಗುಡ್ಡೆಯಲ್ಲಿ ಎ.14 ರಿಂದ ಎ. 17 ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಬ್ರಹ್ಮಕಲಶೋತ್ಸವವು  ನಡೆಯಲಿದೆ. ಉಲ್ಲಾಯ,ಕೊಡಮಣಿತ್ತಾಯ, ಪಿಲಿಚಾಮುಂಡಿ ಹಾಗೂ ಸಪರಿವಾರ ದೈವಗಳ ಕ್ಷೇತ್ರವಾಗಿರುವ ಇಲ್ಲಿ 
 ಈಗಾಗಲೇ ಜೀರ್ಣೋದ್ದಾರ ಕಾರ್ಯಕ್ರಮಗಳು ನಡೆಯುತ್ತಿದ್ದು, ಗರ್ಭಗುಡಿಗೆ ಹಿತ್ತಾಳೆಯ ಮೇಲ್ಛಾವಣಿ, ನೂತನ ರಾಜಗೋಪುರ, ನೂತನ ಬಾವಿ ನಿರ್ಮಾಣ ಕಾರ್ಯಗಳು ನಡೆಯುತ್ತಿದೆ.
ಎ. 15 ರಂದು ಹರಿಯಾಳಗುತ್ತು ಧರ್ಮಚಾವಡಿಯಲ್ಲಿ ಗಡಿಪ್ರಧಾನ ಕಾರ್ಯಕ್ರಮ ನಡೆಯಲಿದ್ದು, 
 ಎ.16 ರಂದು  ಉಲ್ಲಾಯ ಕೊಡಮಣಿತ್ತಾಯ ಪಿಲಿಚಾಮುಂಡಿ ಸಹಿತ ಪರಿವಾರ ದೈವಗಳಿಗೆ ಬ್ರಹ್ಮಕಲಶಾಭಿಷೇಕ ನಡೆಯಲಿದೆ.
ಅಂದು  ಮದ್ಯಾಹ್ನ 1.00 ಗಂಟೆಗೆ ಉಳ್ಳಾಯ ದೈವದ ನೇಮ, ರಾತ್ರಿ 8.00 ಗಂಟೆಗೆ ಕೊಡಮಣಿತ್ತಾಯ ದೈವದ ನೇಮ, ಎ. 17 ರಂದು ಸರಳ ಧೂಮಾವತಿ ಹಾಗೂ ಕಾಂತೇರಿ ಧೂಮಾವತಿ ಬಂಟ ದೈವಗಳಿಗೆ ನೇಮ ರಾತ್ರಿ 11.00 ಗಂಟೆಗೆ ಪಿಲಿಚಾಮುಂಡಿ ದೈವದ ನೇಮ ನಡೆಯಲಿದೆ. ವಿಶೇಷವೆಂದರೆ ಸಾನದಗುಡ್ಡೆ ಅತ್ಯಂತ ಎತ್ತರದ ಗುಡ್ಡ ಪ್ರದೇಶವಾಗಿದ್ದು ಅಂದರೆ ಸಮುದ್ರಮಟ್ಟದಿಂದ ಸುಮಾರು 200 ಮೀಟರ್ ಎತ್ತರದಲ್ಲಿದ್ದು , ಶ್ರೀ ದೈವಗಳು ವಾರ್ಷಿಕ ನೇಮೋತ್ಸವ ಪಡೆಯುತಿದೆ.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ