
ಮಂಗಳೂರು: ರೈಲು ಸೇವೆಯಲ್ಲಿ ವ್ಯತ್ಯಯ
Wednesday, April 23, 2025
ಮಂಗಳೂರು: ತಿರುವನಂತಪುರಂ ರೈಲ್ವೆ ವಿಭಾಗದಲ್ಲಿನ ಸೇತುವೆಸಂಖ್ಯೆ 174ರಲ್ಲಿ ನಿರ್ವಹಣಕಾಮಗಾರಿ ಇರುವುದರಿಂದ ಹಲವು ದಿನಗಳ ಕಾಲ ರೈಲು ಸೇವೆಯಲ್ಲಿ ವ್ಯತ್ಯಯವಾಗಲಿದೆ.
ನಂ.16629 ತಿರುವನಂತಪುರಂ ಸೆಂಟ್ರಲ್-ಮಂಗಳೂರು ಸೆಂಟ್ರಲ್ ಮಲಬಾರ್ ಎಕ್ಸ್ಪ್ರೆಸ್ ರೈಲು ಎ.26ರಂದು ತಿರುವನಂತಪುರಂನಿಂದ ಹೊರಡಲಿರುವುದನ್ನು ಆಲಪುಯ ಮಾರ್ಗವಾಗಿ ಕಳುಹಿಸಲಾಗುವುದು. ಈ ರೈಲು ಮಾವೇಲಿಕ್ಕರ, ಚೆಂಗನ್ನೂರು, ತಿರುವಲ್ಲ, ಚಂಗನಸೇರಿ, ಕೊಟ್ಟಾಯಂ, ಪಿರವಂ ರೋಡ್ ಮತ್ತು ತ್ರಿಪುನಿತ್ತರಗಳಿಗೆ ತೆರಳುವುದಿಲ್ಲ. ಬದಲಾಗಿ ಹರಿಪಡ್, ಅಂಬಾಲಪುಯ, ಆಲಪ್ಪಿ ಚೇರ್ತಳ, ಎರ್ನಾಕುಳಂ ಜಂಕ್ಷನ್ಗಳಲ್ಲಿ ನಿಲುಗಡೆ ಹೊಂದಲಿದೆ.
ನಂ:16347 ತಿರುವನಂತಪುರಂ ಸೆಂಟ್ರಲ್ ಮಂಗಳೂರು ಸೆಂಟ್ರಲ್ ಎಕ್ಸ್ಪ್ರೆಸ್ ಎ.26ರಂದು ತಿರುವನಂತಪುರಂ ಸೆಂಟ್ರಲ್ನಿಂದ ಹೊರಡಲಿದ್ದು ಆಲುಯ ಮೂಲಕ ಮಾರ್ಗ ಬದಲಾಯಿಸಲಿದೆ. ಆ ಮೂಲಕ ಮಾವೇಲಿಕ್ಕರ, ಚೆಂಗನ್ನೂರು, ತಿರುವಲ್ಲ ಚಂಗನಸೇರಿ ಮತ್ತು ಕೊಟ್ಟಾಯಂಗೆ ತೆರಳುವುದಿಲ್ಲ. ಬದಲಾಗಿ ಹರಿಪಡ್, ಅಂಬಾಲ ಪುಯ, ಆಲೆಪ್ಪಿ ಚೇರ್ತಳಗಳಲ್ಲಿ ನಿಲುಗಡೆ ಇರುವುದು ಎಂದು ಪ್ರಕಟಣೆ ತಿಳಿಸಿದೆ.