ತೋಕೂರು : ಮದ್ದೇರಿ ದೈವಸ್ಥಾನ ತೋಕೂರು ಇದರ ಪ್ರತಿಷ್ಠಾ ಕಲಶಾಭಿಷೇಕ ಮತ್ತು ನೇಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ
Tuesday, March 25, 2025
ತೋಕೂರು : ಮದ್ದೇರಿ ದೈವಸ್ಥಾನ ತೋಕೂರು ಇದರ ಪ್ರತಿಷ್ಠಾ ಕಲಶಾಭಿಷೇಕ ಮತ್ತು ನೇಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ತೋಕೂರು ದೇವಸ್ಥಾನದಲ್ಲಿ ನಡೆಯಿತು.
ಈ ಸಂದರ್ಭ ದೇವಳದ ಅರ್ಚಕ ಟಿ. ಕೆ ಮಧುಸೂದನ್ ಆಚಾರ್ಯ, ಮದ್ದೇರಿ ದೇವಸ್ಥಾನ ತೋಕೂರು ಇದರ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪದ್ಮನಾಭ ಆಚಾರ್ಯ, ತೋಕೂರು ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಗುರುರಾಜ ಎಸ್ ಪೂಜಾರಿ, ಸಮಿತಿ ಸದಸ್ಯ ಸಂಪತ್ ಜೆ ಶೆಟ್ಟಿ ತೊಕೂರುಗುತ್ತು, ಪುರುಷೋತ್ತಮ ಕೋಟ್ಯಾನ್, ಸವಿತಾ ಶರತ್, ಅಶೋಕ್ ಕುಂದರ್, ಗೌರವಾಧ್ಯಕ್ಷರಾದ ಟಿ.ಎಸ್ ಪ್ರಭಾಕರ್ ರಾವ್ ಕಂಬಳಬೆಟ್ಟು, ಹರಿದಾಸ್ ಭಟ್, ಪುರುಷೋತ್ತಮ್ ಶೆಟ್ಟಿ ಪಂಜ ಬೈಲಗುತ್ತು, ಪುರುಷೋತ್ತಮ್ ರಾವ್, ಜೀರ್ಣೋದ್ಧಾರದ ಉಪಾಧ್ಯಕ್ಷ ಮೋಹನದಾಸ್, ಕಾರ್ಯದರ್ಶಿಯಾದ ಹೇಮನಾಥ ಅಮೀನ್, ರಮೇಶ್ ದೇವಾಡಿಗ, ಪ್ರಶಾಂತ್ ಬೇಕಲ್, ಅನುಪಮಾ ರಾವ್, ಸುರೇಶ್ ಶೆಟ್ಟಿ ಸುಭಾಸ್ ಅಮೀನ್, ಜಗದೀಶ್ ಕೋಟ್ಯಾನ್, ವಿನೋದ ಭಟ್ ರಾಜೇಶ್ ದಾಸ್, ವಿನೋದ್ ಸುವರ್ಣ, ದೀಪಕ್ ಸುವರ್ಣ ಹಾಗೂ ಮೊದಲಾದವರು ಉಪಸ್ಥಿತರಿದ್ದರು.