
ಮುಲ್ಕಿ:ಶಿಮಂತೂರು ಶ್ರೀ ದೇವರ ವಿಜೃಂಭಣೆಯ ಪೇಟೆ ಸವಾರಿ,ಕಟ್ಟೆ ಪೂಜೆ,ಉತ್ಸವ ಬಲಿ
Saturday, March 15, 2025
ಮುಲ್ಕಿ: ಶಿಮಂತೂರು ಶ್ರೀ ಆದಿ ಜನಾರ್ಧನ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ದೇವರ ಪಂಜಿನಡ್ಕ ಸವಾರಿ, ಶ್ರೀ ದೇವರ ಉತ್ಸವಬಲಿ, ಚಂದ್ರಮಂಡಲ ರಥೋತ್ಸವ, ವಸಂತ ಮಂಟಪ ಪೂಜೆ ವಿಜೃಂಭಣೆಯಿಂದ ನಡೆಯಿತು
ಶ್ರೀ ದೇವರ ಪಂಜಿನಡ್ಕ ಸವಾರಿಯಲ್ಲಿ ಕಟ್ಟೆ ಪೂಜೆ ,ಕೊಲಕಾಡಿ ಕುಂಜಾರಗಿರಿ ದೇವಸ್ಥಾನದಲ್ಲಿ ಎರಡು ದೇವರುಗಳಿಗೆ ಏಕಕಾಲದಲ್ಲಿ ಪೂಜೆ ನಡೆಯಿತು
ಈ ಸಂದರ್ಭ ವೇದಮೂರ್ತಿ ವಾದಿರಾಜ ಉಪಾಧ್ಯಾಯ ಕೊಲಕಾಡಿ ಡಾ. ಶ್ರೀವತ್ಸ ಉಪಾಧ್ಯಾಯ,ದೇವಸ್ಥಾನದ ಅರ್ಚಕ ಪುರುಷೋತ್ತಮ ಭಟ್ ಆಡಳಿತ ಮೊಕ್ತೇಸರ ಉದಯಕುಮಾರ್ ಶೆಟ್ಟಿ,
ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ರೂಪಾ ಭಟ್,ಶಾಂತರಾಮ ಶೆಟ್ಟಿ ತೆಂಗಾಳಿ, ಶಶಿಕಲಾ, ನಂದನ ಶೆಟ್ಟಿ, ಜಯಕರ ಶೆಟ್ಟಿ ಮುಂಬೈ, ರಘುರಾಮ ಶೆಟ್ಟಿ, ಬಾಲಕೃಷ್ಣ ಶೆಟ್ಟಿ ಚಂದ್ರಹಾಸ ಸುವರ್ಣ, ಹರೀಶ್ ಶೆಟ್ಟಿ, ಸುಧೀರ್ ಶೆಟ್ಟಿ, ಕಿರಣ್,ಗೋಪಾಲ್ ಶಿಮಂತೂರು, ಮತ್ತಿತರರು ಉಪಸ್ಥಿತರಿದ್ದರು