-->

ಕಟೀಲು ವರ್ಷಾವಧಿ ಜಾತ್ರೆ

ಕಟೀಲು ವರ್ಷಾವಧಿ ಜಾತ್ರೆ
ಎ.13 ರಿಂದ ಎ.20 ರವರೆಗೆ ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರೆ
ಮಾತಿಗೆ ಮೌನದ ಸಾಂಗತ್ಯವೂ ಬೇಕು - ತೋಳ್ಪಾಡಿ

ಮಾತಿಗೆ ಮೌನದ ಸಾಂಗತ್ಯವೂ ಬೇಕು - ತೋಳ್ಪಾಡಿ

 
ಕಟೀಲು : ಮೌನದ ಸಾಂಗತ್ಯ ಮಾತಿಗೆ ಬಹಳ ಇದೆ. ಮೌನದ ಸಂಗತ್ಯ ಮಾತಿಗೆ ಬಹಳ ಇದೆ. 
ಮಾತಿನ ಪ್ರಕ್ರಿಯೆ 
ಬರೇ ಮಾತಾಡ್ತಿದ್ದ್ರೆ ಮೌನ ಇದ್ದಾಗ 
ಮಾತನ್ನು ಪ್ರೀತಿಸಬೇಕು. 
ಮಾತೇ ಪ್ರಧಾನವಾಗಿರುವ ತಾಳಮದ್ದಲೆಯ ಕಲಾವಿದರಿಗೆ ತಿಳಿದಿರಬೇಕು ಎಂದು ಖ್ಯಾತ ಚಿಂತಕ ಲಕ್ಷ್ಮೀಶ ತೋಳ್ಪಾಡಿ ಹೇಳಿದರು.
ಅವರು ಕಟೀಲು ಶ್ರೀ ದು.ಪ.ದೇ.ಪದವಿ ಕಾಲೇಜಿನಲ್ಲಿ ಯಕ್ಷಗಾನ ಅಕಾಡಮಿ, ಶ್ರೀ ಕಟೀಲು ದೇವಳ, ಶ್ರೀ ದುರ್ಗಾ ಮಕ್ಕಳ ಮೇಳಗಳ ಸಹಯೋಗದಲ್ಲಿ ನಡೆದ ಎರಡು ದಿನಗಳ ತಾಳಮದ್ದಲೆ ಕಮ್ಮಟದ ವಿಚಾರಗೋಷ್ಟಿ ತಾಳಮದ್ದಲೆಯಲ್ಲಿ ಪುರಾಣ ಹಾಗೂ ಪ್ರಸಂಗಗಳ ಸಮನ್ವಯದ ಅಧ್ಯಕ್ಷತೆ ವಹಿಸಿ ಮಾತನಾಡಿದರು. 
 ಹೊಗಳಿದರೆ ತೆಗಳಿದಂತೆ ತೆಗಳಿದರೆ ಹೊಗಳಿದಂತೆ ಕಾಣುವಂತೆ ಮಾಡುವ, ವಿರೋಧವನ್ನೂ ಅವಿರೋಧವನ್ನೂ ಒಟ್ಟಿಗೆ ಕಾಣುವ ಸಾಧ್ಯತೆ ಮಾತಿಗೆ ಇದೆ. ದೇವರು 
ಸರ್ವ ವ್ಯಾಪಿ ಎಂದರೆ ಎಲ್ಲ ಕಡೆ ಇದ್ದಾನೆ ಎಂದೇ ಅರ್ಥ. ಪೂಜಿಸುವಲ್ಲಿ ವಿರೋಧಿಸುವಲ್ಲೂ ಇದ್ದಾನೆ ಎಂದರ್ಥ. ಕಲೆಯಲ್ಲೂ ಹಾಗೆಯೇ. ದೇವರನ್ನು ಸಮನ್ವಯ ಸೂತ್ರವಾಗಿ ಅರ್ಥೈಸಬೇಕು. 
ಆಧ್ಯಾತ್ಮಿಕತೆಯ ರಹಸ್ಯಗಳನ್ನು ಅರ್ಥೈಸಿಕೊಂಡರೆ ಕಲಾವಿದ ಬೆಳೆಯುತ್ತಾನೆ ಎಂದರು. 
ಶ್ರೀಧರ ಡಿ.ಎಸ್ ಮಾತನಾಡಿ 
ಮಾತು ಕಲೆಯಾಗಿ ರೂಪುಗೊಳ್ಳುವ 
ತಾಳಮದ್ದಲೆಯಲ್ಲಿ ಚಾಪೆಯಲ್ಲಿ ಕೂತು ಮಾತಾಡುತ್ತ ತನ್ನನ್ನೇ ಮರೆತು ರಾಮ, ರಾವಣ, ಭೀಮ, ಹೀಗೆ ಪಾತ್ರಗಳು ದೇವತೆ, ರಕ್ಕಸನಾಗುವುದನ್ನು ಪ್ರೇಕ್ಷಕರೂ ಅನುಭವಿಸುತ್ತಾರೆ. ಮಾತಿನಲ್ಲೇ ಪುರಾಣ ಕಟ್ಟುವ ತನ್ನನ್ನೇ ಮರೆಯುವ ಪ್ರಕ್ರಿಯೆ ಇಲ್ಲಿ ಆಗುತ್ತದೆ. 
ಪ್ರಸಂಗಗಳು ಬಯಲಾಟಕ್ಕಾಗಿ ಪಾಮರ ಪ್ರೇಕ್ಷಕರಿಗಾಗಿ ರಚಿತವಾದವು. ಅಂತಹ ಪ್ರಸಂಗಗಳನ್ನು ಶೇಣಿಯಂತವರು ಮಾತಿನಿಂದ ದೊಡ್ಡದು ಮಾಡಿದ್ದಾರೆ.
ಕಲಾವಿದರಿಗೆ ಪ್ರತ್ಯುತ್ಪನ್ನಮತಿತ್ವ ಬೇಕು. ತಾಳಮದ್ದಲೆ ಕೂಟ ಆರಂಭವಾದಾಗ ಅರ್ಥ ಹೇಳಲು  ನೂರಾರು ಮಂದಿ ಇದ್ದವರು ಎರಡು ಮೂರು ವರ್ಷ ಆದ ಮೇಲೆ ಆರು ಜನರೂ ಇರುವುದಿಲ್ಲ. 
ಮಾತು ಕಲೆಯಾಗುವುದು ಸಾಧನೆಯ ಮೂಲಕ ಆಗುವುದು. 
ಕಾಲಮಿತಿಯ ತಾಳಮದ್ದಲೆಯಲ್ಲಿ ಕ್ಯಾಸೆಟ್ ಗಳ ಅರ್ಥವೇ ಬರುತ್ತಿದೆ. ಅರ್ಥಕ್ಕೆ ಕ್ಯಾಸೆಟ್ ಗಳೇ ಆಧಾರಗಳಾಗಬಾರದು.ಪ್ರಸಂಗ ಪುರಾಣ ಆಧಾರ ಎಲ್ಲದರ ಅಧ್ಯಯನ, ಸಮನ್ವಯ ಆಗಬೇಕು. ಪ್ರಸಂಗಗಳಿಗೆ ಹೊಸರೂಪ ಕೊಡಬೇಕಾದ ಅಗತ್ಯವಿದೆ ಎಂದರು. 
ಗಣರಾಜ ಕುಂಬ್ಳೆ ಮಾತನಾಡಿ 
ರಾವಣ, ಅತಿಕಾಯ. ರಕ್ತಬೀಜ. ಶುಂಭ ಕರ್ಣ ಪಾತ್ರಗಳಲ್ಲಿ ವಿರೋಧ ಭಕ್ತಿಯನ್ನು ಕಾಣುತ್ತೇವೆ. 
ದೇವರನ್ನು ವಿರೋಧಿಸುವುದು ಮತ್ತು ಸಮರ್ಥಿಸುವುದು ಇವುಗಳನ್ನು ಸಮನ್ವಯಗೊಳಿಸಿ ಅರ್ಥ ಹೇಳುವುದು ತಾಳಮದ್ದಲೆಯ ಯಶಸ್ಸು. 
ತಾತ್ವಿಕವಾದ ವಿರೋಧ, ಮೌಲ್ಯಗಳ ಜಿದ್ದಾಜಿದ್ದಿ ಪ್ರೇಕ್ಷಕರಿಗೆ ಖುಷಿ ಆಗುತ್ತದೆ.
ವಿರೋಧವೂ ಭಕ್ತಿಯಾಗುವುದನ್ನು ಕಾಣಲು ಕಲೆಯಲ್ಲಿ ಸಾಧ್ಯ. 
ನಿಂದಾಸ್ತುತಿಯ ಮೂಲಕ ಕೃಷ್ಣನನ್ನು ಆರಾಧಿಸುವ ಕಂಸನ ಪಾತ್ರ ಹೀಗೆ ಅನೇಕ ಪಾತ್ರಗಳಲ್ಲಿ ಕಾಣಬಹುದು ಎಂದರು. 
ಸುಣ್ಣಂಬಳ ವಿಶ್ವೇಶ್ವರ ಭಟ್ ಮಾತನಾಡಿ ಸುಣ್ಣಂಬಳ
ದೇವರಲ್ಲಿ ಇರುವಂತೆ 
ಕಲಾವಿದರಲ್ಲೂ  ವಿರೋಧ ಭಕ್ತಿಯನ್ನು ಕಾಣಬಹುದು. ಒಳಗೆ ಪ್ರೀತಿ ಭಕ್ತಿ ಇದ್ದರೆ ವೇದಿಕೆಯಲ್ಲಿ ಪಾತ್ರವಾಗಿ ವಿರೋಧಿಸುತ್ತಾರೆ. 
ರಂಗ ಧರ್ಮ ಅನುಸಾರವಾಗಿ ಭೀಷ್ಮ ಪ್ರಸಂಗದಲ್ಲಿ ಬರುವ ಬ್ರಾಹ್ಮಣ ಪಾತ್ರ ರಂಗಕ್ಕೆ ಸರಿ. ಬ್ರಾಹ್ಮಣ ಪಾತ್ರವೇ ಮುಖ್ಯವಾಗಿ ಭೀಷ್ಮನ ಪಾತ್ರ ಸಣ್ಣದಾಗಬಾರದಲ್ಲವೆ. ಪಾತ್ರಗಳ ತಿಳುವಳಿಕೆ ಬೇಕು. ಒಟ್ಟಂದದಲ್ಲಿ ಸಮಾಜಕ್ಕೆ ಒಳ್ಳೆಯದನ್ನು ತಿಳಿಸುವುದು.ಕೆಟ್ಟದು ನಾಶ ಆಗುತ್ತದೆ ಒಳ್ಲೆಯದು ಉಳಿಯುತ್ತದೆ ಎಂಬುದನ್ನು ತಿಳಿಸುವ ತಾಳಮದ್ದಲೆಯಲ್ಲಿ 
ಪ್ರಸಂಗದ ಕೊನೆಗೆ ಪಾತ್ರ ಹಾಳಾಗಿ ಸಂದೇಶವನ್ನೂ ತಲುಪಿಸದೆ ಹೋದರೆ ಸರಿಯಲ್ಲ. ಸಮನ್ವಯ ಸಾಧಿಸದೆ ಎದುರಿನ ಪಾತ್ರಧಾರಿಯನ್ನು ಮಾತಿನಲ್ಲಿ ಸೋಲಿಸುವುದೇ ಮುಖ್ಯವಾಗಬಾರದು ಎಂದರು. 
ವಾಸುದೇವರಂಗಾ ಭಟ್ ನಿರೂಪಿಸಿದರು.

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ