ಕಟೀಲಿಗೆ ತೇಜಸ್ವಿಸೂರ್ಯ ದಂಪತಿ ಭೇಟಿ
Tuesday, March 18, 2025
ಕಟೀಲು: ಸಂಸದ, ಯುವಮೋರ್ಛಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವೀ ಸೂರ್ಯ ಹಾಗೂ ಪತ್ನಿ ಶಿವಶ್ರೀ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಕುಟುಂಬ ಸಹಿತರಾಗಿ ಭೇಟಿ ನೀಡಿ ಶ್ರೀ ದೇವರ ದರ್ಶನ ಪಡೆದರಲ್ಲದೆ, ಅನ್ನಪ್ರಸಾದ ಸ್ವೀಕರಿಸಿದರು.
ದುರ್ಗೆಯ ಮುಂದೆ ತೇಜಸ್ವೀ ಸೂರ್ಯ ದುರ್ಗಾ ಸೂಕ್ತ ಪಠಿಸಿದರು. ನವದಂಪತಿಗಳಿಗೆ ಲಕ್ಷೀನಾರಾಯಣ ಆಸ್ರಣ್ಣ ದೇವರ ಶೇಷವಸ್ತ್ರ, ಪ್ರಸಾದ ನೀಡಿದರು. ಬಳಿಕ ಮೂಲ ಕುದುರುಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
ತೇಜಸ್ವೀಸೂರ್ಯ ಸಂಬಂಧಿ, ಬಸವನಗುಡಿ ಶಾಸಕ ರವಿಸುಬ್ರಹ್ಮಣ್ಯ ಅವರಿಗೂ ಶೇಷವಸ್ತ್ರ ನೀಡಲಾಯಿತು.
ಕಟೀಲು ದೇಗುಲಕ್ಕೆ ಬಂದ ಭಕ್ತರನೇಕರು, ತೇಜಸ್ವ ಸೂರ್ಯ ಅವರನ್ನು ಅಭಿನಂದಿಸಿ, ಮಾತಾಡಿಸಿ ಸಂಭ್ರಮಿಸಿದರು.
ಸನತ್ಕುಮಾರ್ ಶೆಟ್ಟಿ ಕೊಡೆತ್ತೂರುಗುತ್ತು, ಅನಂತ ಆಸ್ರಣ್ಣ, ಪ್ರಸಾದ ಆಸ್ರಣ್ಣ, ಶ್ರೀಹರಿ ಆಸ್ರಣ್ಣ, ಗೋಪಾಲಕೃಷ್ಣ ಆಸ್ರಣ್ಣ, ಪ್ರವೀಣ್ ಭಂಡಾರಿ ಉಪಸ್ಥಿತರಿದ್ದರು.