-->

ಕಟೀಲು ವರ್ಷಾವಧಿ ಜಾತ್ರೆ

ಕಟೀಲು ವರ್ಷಾವಧಿ ಜಾತ್ರೆ
ಎ.13 ರಿಂದ ಎ.20 ರವರೆಗೆ ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರೆ
ಗುರುಪುರ:ಮಾ. 24 ರಿಂದ 26 ರವರೆಗೆ   ಪಾಲಿಕಟ್ಟೆಕಾಲಾವಧಿ ನೇಮೋತ್ಸವ

ಗುರುಪುರ:ಮಾ. 24 ರಿಂದ 26 ರವರೆಗೆ ಪಾಲಿಕಟ್ಟೆಕಾಲಾವಧಿ ನೇಮೋತ್ಸವ

ಕೈಕಂಬ : ಪೆರ್ಮಂಕಿ ಪಾಲಿಕಟ್ಟೆಯ ಶ್ರೀ ವೈದ್ಯನಾಥ, ಮೈಸಂದಾಯ ಧೂಮಾವತಿ ಬಂಟ ದೈವಸ್ಥಾನದಲ್ಲಿ ಮಾ. 24ರಿಂದ 26ರವರೆಗೆ ಕಾಲಾವಧಿ ಪಾಲಿಕಟ್ಟೆ ನೇಮೋತ್ಸವ ಜರುಗಲಿದೆ.

ಮಾ. 24ರಂದು ಪೆರ್ಮಂಕಿ ಗುತ್ತಿನ ಮನೆಯಲ್ಲಿ ಬೆಳಿಗ್ಗೆ 7:30ಕ್ಕೆ ಗಣಪತಿ ಹೋಮ, ದೈವಗಳಿಗೆ ಹೋಮ, ಕಜ್ಜಾಯ ಸೇವೆ, ದೈವದ ದರ್ಶನ ನಡೆದ ಬಳಿಕ ಪೆರ್ಮಂಕಿ ಗುತ್ತಿನ ಮನೆಯಿಂದ ದೈವಗಳ ಭಂಡಾರವು ಪಾಲಿಕಟ್ಟೆ ದೈವಸ್ಥಾನಕ್ಕೆ ಬಂದು ಭಂಡಾರ ಏರಲಿದೆ. ಮಧ್ಯಾಹ್ನ 12:30ರಿಂದ ಸಾರ್ವಜನಿಕ ಅನ್ನಸಂತರ್ಪಣೆ, ರಾತ್ರಿ 9:30ಕ್ಕೆ ಮೂಲ ಮೈಸಂದಾಯ ದೈವದ ನೇಮ, 11:15ಕ್ಕೆ ಶ್ರೀ ವೈದ್ಯನಾಥ ದೈವದ ಗಗ್ಗರ ಸೇವೆ, ದರ್ಶನ ಬಲಿ, ಪಲ್ಲಕಿ ಬಲಿ, ವಲಸರಿ, ಅಭಯ ಪ್ರದಾನ ನೆರವೇರುವುದು.

ಮಾ. 25ರಂದು ರಾತ್ರಿ 9:30ರಿಂದ ಶ್ರೀ ಧೂಮಾವತಿ(ಜುಮಾದಿ) ಬಂಟ ದೈವಗಳ ನೇಮ, ಅಭಯ ಪ್ರದಾನ, ಪ್ರಸಾದ ವಿತರಣೆ. ಬಳಿಕ ದೈವಗಳ ಭಂಡಾರ ನಿರ್ಗಮನವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ