ಗುರುಪುರ ಶ್ರೀ ಮುಂಡಿತ್ತಾಯ ದೈವಸ್ಥಾನ ವ್ಯವಸ್ಥಾಪನಾಸಮಿತಿಯ ಅಧ್ಯಕ್ಷರಾಗಿಪದ್ಮನಾಭ ಶೆಟ್ಟಿ ದೋಣಿಂಜೆಗುತ್ತು ಆಯ್ಕೆ
Monday, February 10, 2025
ಕೈಕಂಬ: ಜಿಲ್ಲಾ ಧಾರ್ಮಿಕ ಪರಿಷತ್ ಹಾಗೂ ಸಹಾಯಕ ಆಯುಕ್ತರು ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯು ಮಂಗಳೂರು ತಾಲೂಕಿನ ಗುರುಪುರದ ಮೂಳೂರು ಶ್ರೀ ಮುಂಡಿತ್ತಾಯ(ವೈದ್ಯನಾಥ) ದೈವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿಗೆ 9 ಮಂದಿ ಸದಸ್ಯರ ಹೆಸರು ಪ್ರಕಟಿಸಿದ್ದು, ಸಮಿತಿಗೆ ಪದ್ಮನಾಭ ಶೆಟ್ಟಿ ದೋಣಿಂಜೆಗುತ್ತು ಅವರು ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ.
ಸಮಿತಿಯಲ್ಲಿ ಅರ್ಚಕರಾಗಿ ಮುಂಡಿತ್ತಾಯ ಪಾತ್ರಿ ಚಂದ್ರಹಾಸ ಪೂಜಾರಿ ಕೌಡೂರು, ಇತರ ಸದಸ್ಯರಾಗಿ ವಿಜಯಲಕ್ಷ್ಮೀ ಬೆಳ್ಳೂರು, ಚಂದ್ರಕಲಾ ಕಿನ್ನಿಮಜಲು, ಚಂದ್ರಾವತಿ ಅಲೈಗುಡ್ಡೆ, ತನಿಯಪ್ಪ ಪೂಜಾರಿ ಗುರುಪುರ(ಧೂಮಾವತಿ ಪಾತ್ರಿ), ಪುರಂದರ ಮಲ್ಲಿ ದೋಣಿಂಜೆಗುತ್ತು, ಡಾ. ರವಿರಾಜ ಶೆಟ್ಟಿ ಕಾರಮೊಗರುಗುತ್ತು, ಕೆ. ಸದಾಶಿವ ಶೆಟ್ಟಿ ಗುರುಪುರ ಆಯ್ಕೆಯಾಗಿದ್ದಾರೆ.