-->


ಗುರುಪುರ: ಫೆ. 13-  15ರವರೆಗೆ `ಬಂಡಿ' ಜಾತ್ರೆ,ಪೂರ್ವಭಾವಿ ಸಭೆ

ಗುರುಪುರ: ಫೆ. 13- 15ರವರೆಗೆ `ಬಂಡಿ' ಜಾತ್ರೆ,ಪೂರ್ವಭಾವಿ ಸಭೆ

ಕೈಕಂಬ  : ಗುರುಪುರ ಮೂಳೂರು ಶ್ರೀ ಮುಂಡಿತ್ತಾಯ(ವೈದ್ಯನಾಥ) ದೈವಸ್ಥಾನದಲ್ಲಿ ಫೆ. 13ರಿಂದ 15ರವರೆಗೆ ನಡೆಯಲಿರುವ `ಬಂಡಿ' ಜಾತ್ರೆಯ ಪ್ರಯುಕ್ತ ಪ್ರಧಾನ ಗಡಿಕಾರ ದೋಣಿಂಜೆಗುತ್ತು ಪ್ರಮೋದ್ ಕುಮಾರ್ ರೈ ಅವರ ನೇತೃತ್ವದಲ್ಲಿ ಫೆ. 2ರಂದು ದೈವಸ್ಥಾನದಲ್ಲಿ ಪೂರ್ವಭಾವಿ ಸಭೆ ನಡೆಯಿತು.
ಸಭೆಯಲ್ಲಿ ಅನ್ನದಾನ ವ್ಯವಸ್ಥೆ, ಸಂತೆ-ವ್ಯಾಪಾರ, ಧಾರ್ಮಿಕ ವಿಧಿ-ವಿಧಾನಗಳ ಕುರಿತು ಸಭಿಕರು ಸಲಹೆ-ಸೂಚನೆ ನೀಡಿದರು. ಸಭೆಯಲ್ಲಿ ಗುತ್ತುಗಳ ಯಜಮಾನರು, ದೈವಸ್ಥಾನದ ತಂತ್ರಿ ಜಿ. ಟಿ. ವಾಸುದೇವ ಭಟ್, ದೈವದ ಪಾತ್ರಿಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸದಸ್ಯರು, ಊರಿನ ನಾಗರಿಕರು ಉಪಸ್ಥಿತರಿದ್ದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

Advertise under the article