-->

ಕಟೀಲು ವರ್ಷಾವಧಿ ಜಾತ್ರೆ

ಕಟೀಲು ವರ್ಷಾವಧಿ ಜಾತ್ರೆ
ಎ.13 ರಿಂದ ಎ.20 ರವರೆಗೆ ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರೆ
ಮೂಲ್ಕಿಯಲ್ಲಿ ಉದ್ಯಮಶೀಲತಾ ಕಾರ್ಯಾಗಾರ

ಮೂಲ್ಕಿಯಲ್ಲಿ ಉದ್ಯಮಶೀಲತಾ ಕಾರ್ಯಾಗಾರ

ಮೂಲ್ಕಿ: ಶ್ರೀಕೃಷ್ಣ ಸುಧಾಮ ವೆಲ್‌ಫೇ‌ರ್ ಫೌಂಡೇಶನ್  ಮೂಲ್ಕಿ ವತಿಯಿಂದ ಶ್ರೀ ಕ್ಷೇತ್ರ ಬಪ್ಪನಾಡುವಿನ ಶ್ರೀ ಅನ್ನಪೂರ್ಣೇಶ್ವರೀ ಸಭಾಂಗಣದಲ್ಲಿ ಮಂಗಳವಾರದಂದು ನಡೆದ ಸ್ವಾಮಿ ವಿವೇಕಾನಂದ ಜಯಂತಿ ಅಂಗವಾಗಿ ಯುವ ಸಂಚಲನ ಯೋಜನೆಯಡಿ ಕೇಂದ್ರ ಸರಕಾರದ ನಾನಾ ಸ್ವಉದ್ಯೋಗ ಯೋಜನೆಗಳ ಉಪಯುಕ್ತ ಮಾಹಿತಿ ಶಿಬಿರ "ಉದ್ಯಮಶೀಲತಾ ಕಾರ್ಯಾಗಾರ" ವನ್ನು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್  ಅವರು
ಉದ್ಘಾಟಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿಮೆಂಬರ್ ಆಫ್ ಡಿ ಅರ್ಡರ್ ಆಫ್ ಬ್ರಿಟಿಷ್ ಎಂಪೈರ್ ಪ್ರಶಸ್ತಿ ಪುರಸ್ಕೃತ ಡಾ.ಹಂಸರಾಜ್ ಶೆಟ್ಟಿ ಜಿ.ಎಮ್.ರವರನ್ನು ಫೌಂಡೇಶನ್ ವತಿಯಿಂದ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.

ಬಪ್ಪನಾಡು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಮೊಕ್ತಸರ ಎನ್‌.ಎಸ್‌.ಮನೋಹರ ಶೆಟ್ಟಿ, ಮೂಲ್ಕಿ ನ.ಪಂ. ಅಧ್ಯಕ್ಷ ಸತೀಶ್‌ ಅಂಚನ್, ಮುಂಬೈ ಉದ್ಯಮಿ ಯದುನಾರಾಯಣ ಶೆಟ್ಟಿ, ಶ್ರೀಕೃಷ್ಣ ಸುಧಾಮ ವೆಲ್‌ಫೇರ್ ಫೌಂಡೇಶನ್‌  ನ ಅಧ್ಯಕ್ಷ ಸುನಿಲ್ ಆಳ್ವ,
ಸಂಪನ್ಮೂಲ ವ್ಯಕ್ತಿ ಸುಂದರ ಶೇರಿಗಾರ್  ಹಾಗೂ ಮೊದಲಾದವರು ಉಪಸ್ಥಿತರಿದ್ದರು.

ಬಳಿಕ ಸ್ವ ಉದ್ಯಮ ಮತ್ತು ಉದ್ಯಮಶೀಲತೆ ಕುರಿತು ದೇವರಾಜ್ ಕೆ., ಸ್ವಾವಲಂಬನೆಯ ಬದುಕು ಕುರಿತು ಸತೀಶ್ ಮಾಬೆನ್, ಹಣಕಾಸು ನಿರ್ವಹಣೆ ಕುರಿತು ಲತೇಶ್ ಬಿ., ಪಶುಸಂಗೋಪನೆ ಮತ್ತು ಗ್ರಾಮ ವಿಕಾಸ ಕುರಿತು ಡಾ.ವಸಂತ ಕುಮಾರ್ ಶೆಟ್ಟಿ, ಯಶಸ್ವೀ ಉದ್ಯಮಿ ಕುರಿತು ಆ‌ರ್.ವಿ.ಒಡೆಯರ್ ರವರಿಂದ ಕಾರ್ಯಾಗಾರ ನಡೆಯಿತು ಸಂತೋಷ್ ನಂಬಿಯಾರ್ ಕಾರ್ಯಕ್ರಮ ನಿರ್ವಹಿಸಿದರು. ನವೀನ್‌ರಾಜ್ ವಂದಿಸಿದರು.

ಕಾರ್ಯಾಗಾರದಲ್ಲಿ125 ಮಂದಿ ಭಾಗವಹಿಸಿದ್ದು, ಪ್ರಮಾಣಪತ್ರ ವಿತರಿಸಲಾಯಿತು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ