ಜೈ ತುಲುನಾಡ್ (ರಿ.) ಮಂಗಳೂರು ಘಟಕ ಮತ್ತು ಯುವ ವಾಹಿನಿ ಬಜಪೆ ಘಟಕದ ವತಿಯಿಂದ' ಬಲೇ ದೈ ನಡ್ಕ ಕಾರ್ಯಕ್ರಮ'
Thursday, June 20, 2024
ಬಜಪೆ : ಜೈ ತುಲುನಾಡ್ (ರಿ.) ಮಂಗಳೂರು ಘಟಕ ಮತ್ತು ಯುವ ವಾಹಿನಿ ಬಜಪೆ ಘಟಕದ ವತಿಯಿಂದ ಬಜಪೆಯ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಶ್ರೀ ಕ್ಷೇತ್ರ ದೊಡ್ಡಿಕಟ್ಟ ಸ್ವಯಂಭೂಲಿಂಗೇಶ್ವರ ದೇವಸ್ಥಾನದಲ್ಲಿ “ಬಲೆ ದೈ ನಡ್ಕ” ಕಾರ್ಯಕ್ರಮವು ನಡೆಯಿತು. ಬಜ್ಪೆ ಪ್ರಾಥಮಿಕ ಆರೋಗ್ಯ ಕೇಂದ್ರ ದ ವೈದ್ಯಾಧಿಕಾರಿ ಡಾ ಶಂಕರ್ ನಾಗ್ ಹಾಗೂ ಜೈ ತುಲುನಾಡ್ (ರಿ.) ಮಂಗಳೂರು ಘಟಕ ಮತ್ತು ಯುವವಾಹಿನಿ (ರಿ) ಬಜಪೆ ಘಟಕದ ಅಧ್ಯಕ್ಷ ನಿರಂಜನ್ ಕರ್ಕೇರ ಅವರು ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಮೂಲ್ಕಿ ಮೂಡಬಿದ್ರೆ ಮಂಡಲ ರೈತ ಮೋರ್ಚಾದ ಅಧ್ಯಕ್ಷ ರಾಜೇಶ್ ಅಮೀನ್, ಯುವವಾಹಿನಿ (ರಿ) ಕೇಂದ್ರ ಸಮಿತಿ ಸಂಘಟನಾ ಕಾರ್ಯದರ್ಶಿ ಪ್ರಸಾದ್ ಪಾಲನ್, ಜೈ ತುಳುನಾಡ್ (ರಿ) ಕೇಂದ್ರ ಸಮಿತಿಯ ಅಧ್ಯಕ್ಷ ಉದಯ್ ಪೂಂಜ, ಸ್ಥಾಪಕ ಸದಸ್ಯರಾದ ಕಿರಣ್ ತುಲುವೆ ರಕ್ಷಿತ್ ಕೋಟ್ಯಾನ್, ಜೈ ತುಲುನಾಡ್ (ರಿ) ಕುಡ್ಲ ಘಟಕದ ಉಪಾಧ್ಯಕ್ಷ ಮನೀಶ್ ಅಂಚನ್ ಕಾರ್ಯದರ್ಶಿ ಚೇತನ್ ಅಂಚನ್, ಜೊತೆ ಕಾರ್ಯದರ್ಶಿ ಪುನೀತ್ ಬೋಳೂರು ,ಸದಸ್ಯರಾದ ಚಿರಾಗ್ ಪೊರ್ಕೋಡಿ, ಪವಿತ್ರ ಸುರತ್ಕಲ್ ಯುವವಾಹಿನಿ (ರಿ) ಕುಪ್ಪೆಪದವು ಘಟಕದ ಸ್ಥಾಪಕಧ್ಯಕ್ಷ ಅರುಣ್ ಕುಮಾರ್, ಯುವವಾಹಿನಿ (ರಿ) ಬಜ್ಪೆ ಘಟಕದ ಸ್ಥಾಪಕಧ್ಯಕ್ಷ ವಿನೋಧರ ಪೂಜಾರಿ, ಮಾಜಿ ಅಧ್ಯಕ್ಷರುಗಳಾದ ರಾಜೇಶ್ ದೇವರಾಜ್ ಅಮೀನ್, ಚಂದ್ರಶೇಖರ್ ಪೂಜಾರಿ, ಯೋಗೀಶ್ ಪೂಜಾರಿ ಕೆಂಜಾರು, ನಿಕಟಪೂರ್ವ ಅಧ್ಯಕ್ಷ ಮಾಧವ ಸಾಲಿಯನ್, ಉಪಾಧ್ಯಕ್ಷ ರಾದ ರೇಣುಕಾ ಶೇಖರ್, ನಿಶಾಲ್ ಪೂಜಾರಿ, ಪದಾಧಿಕಾರಿಗಳಾದ ಚಿತ್ತರಂಜನ್ ಸಾಲಿಯನ್, ಭಾಸ್ಕರ ಪೂಜಾರಿ, ಶರ್ಮಿಳಾ ಚಂದ್ರಶೇಖರ್, ಸಂಧ್ಯಾ ಸುನಿಲ್, ಲೀಲಾವತಿ ತಾರಿಕಂಬಳ, ಸದಸ್ಯರುಗಳಾದ ಆನಂದ ಪೂಜಾರಿ, ಸುಚಿತಾ ದೇವರಾಜ್, ಶಿಲ್ಪಾ ದಿನೇಶ್, ಜಯಶ್ರೀ ನಾಗೇಶ್,ವಿಜಯ, ಪುರುಷೋತ್ತಮ್ ಕೊಟ್ಯಾನ್, ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ (ರಿ) ಬಜ್ಪೆ ಕರ0ಬಾರು ಇದರ ಕಾರ್ಯದರ್ಶಿಯಾದ ಸಂದೀಪ್, ವಿನೀಶ್, ದಿನೇಶ್ ಕುಮಾರ್, ಗಂಗಾಧರ್ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ವರ್ಗ , ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.