ಅಷ್ಟಬಂಧ ಪುನರ್ ಪ್ರತಿಷ್ಠಾಪನೆ ,ಬ್ರಹ್ಮಕಲಶಾಭಿಷೇಕ ಮಹೋತ್ಸವ , ವಾರ್ಷಿಕ ಪ್ರತಿಷ್ಠಾ ಮಹೋತ್ಸವ
Thursday, March 7, 2024
ಕಿನ್ನಿಗೋಳಿ:ಶ್ರೀ ಮೂಕಾಂಬಿಕಾ ದೇವಸ್ಥಾನ ಗುತ್ತಕಾಡು ಶಾಂತಿನಗರ ಕಿನ್ನಿಗೋಳಿ ಇಲ್ಲಿ ಮಾ.10 ರಿಂದ ಮಾ.15 ರ ತನಕ ಶಾಂತಿನಗರ ಶ್ರೀ ಮೂಕಾಂಬಿಕಾ ಅಮ್ಮನವರ ಸನ್ನಿಧಾನದಲ್ಲಿ ಧಾರ್ಮಿಕ ಸಿದ್ದಾಂತಿ ವೇದಮೂರ್ತಿ ಶ್ರೀ ಕೇಶವಶಾಂತಿ ಬನ್ನಂಜೆ ಇವರ ಉಪಸ್ಥಿತಿಯಲ್ಲಿ ಹಾಗೂ ಶ್ರೀಕೃಷ್ಣ ಕ್ಷೇತ್ರಕಾರ್ಕಳದ ಪ್ರಧಾನ ಅರ್ಚಕ ಶ್ರೀ ಸದಾನಂದ ಶಾಂತಿ ಹಾಗೂ ವಿವಿದ ಋತ್ವಿಜರ ಸಹಭಾಗಿತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಅಷ್ಟಬಂಧ ಪುನರ್ ಪ್ರತಿಷ್ಠಾಪನೆ ,ಬ್ರಹ್ಮಕಲಶಾಭಿಷೇಕ ಮಹೋತ್ಸವ ಹಾಗೂ 43ನೇ ವಾರ್ಷಿಕ ಪ್ರತಿಷ್ಠಾ ಮಹೋತ್ಸವವು ವಿಜೃಂಭಣೆಯಿಂದ ಜರುಗಲಿದೆ
ಈ ಸಂದರ್ಭ ವಿವಿಧ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ,ಧಾರ್ಮಿಕ ಸಭೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.ಪ್ರತಿದಿನ ಬೆಳಿಗ್ಗಿನಿಂದ ರಾತ್ರಿಯವರೆಗೆ ಉಪಾಹಾರ ಮತ್ತು ಅನ್ನಸಂತರ್ಪಣೆಯು ನಡೆಯಲಿದೆ