ಬ್ರಹ್ಮಕಲಶ ಹೊರೆಕಾಣಿಕೆಯ ಪೂರ್ವಭಾವಿ ಸಭೆ
Saturday, January 27, 2024
ಕೈಕಂಬ:ಮಂಗಳೂರು ತಾಲೂಕಿನ ಮಳಲಿ ಮಟ್ಟಿ ಜೋಗಿಮಠ ಶ್ರೀ ಕಾಲಬೈರವ ಮಂಜುನಾಥ ದೇವಸ್ಥಾದಲ್ಲಿ ಪೆ.20 ರಿಂದ ಫೆ.26 ರವರೆಗೆ ಬ್ರಹ್ಮಕಲಶೋತ್ಸವವು ನಡೆಯಲಿದ್ದು,ಆ ಪ್ರಯುಕ್ತ ನಡೆಯುವ ಹೊರೆಕಾಣಿಕೆಯ ಪೂರ್ವಭಾವಿ ಸಭೆಯು ಶುಕ್ರವಾರದಂದು ದೇವಳದಲ್ಲಿ ನಡೆಯಿತು. ಈ ಸಂದರ್ಭ ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಚಂದ್ರಹಾಸ ಶೆಟ್ಟಿ ನಾರಳ , ಬ್ರಹ್ಮಕಲಶೋತ್ಸವ ಸಮಿತಿಯ ಕೋಶಾಧಿಕಾರಿ ಶೋಹನ್ ಅತಿಕಾರಿ, ಹೊರೆಕಾಣಿಕೆ ಸಮಿತಿಯ ಸಂಚಾಲಕ ಕೇಶವ ಪೂಜಾರಿ ಹಾಗೂ ಭಕ್ತರು ಉಪಸ್ಥಿತರಿದ್ದರು.