ಶ್ರೀ ಗಜಾನನ ಸ್ಪೋರ್ಟ್ಸ್ ಕ್ಲಬ್ (ರಿ) ತೋಕೂರು ವತಿಯಿಂದ ಸ್ವಚ್ಛತಾ ಕಾರ್ಯಕ್ರಮ
Friday, September 29, 2023
ಹಳೆಯಂಗಡಿ : ಶ್ರೀ ಗಜಾನನ ಸ್ಪೋರ್ಟ್ಸ್ ಕ್ಲಬ್ (ರಿ) ತೋಕೂರು, ಹಳೆಯಂಗಡಿ ವತಿಯಿಂದ ಕರ್ನಾಟಕ ಗೃಹ ಮಂಡಳಿ , ಸುಖಾನಂದ ನಗರ ಹೋಗುವ ರಸ್ತೆಯ ಎರಡು ಬದಿಯ ಮರದ ಕೊಂಬೆಗಳನ್ನು ಕಡಿಯುವುದರ ಮೂಲಕ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಪಡುಪಣಂಬೂರು ಗ್ರಾ.ಪಂನ ಉಪಾಧ್ಯಕ್ಷ ಹೇಮನಾಥ್ ಅಮೀನ್, ಸಂಸ್ಥೆಯ ಗೌರವಾಧ್ಯಕ್ಷ ನವೀನ್ ಶೆಟ್ಟಿಗಾರ್, ಅಧ್ಯಕ್ಷ ರಾಮಕೃಷ್ಣ, ಪ್ರಧಾನ ಕಾರ್ಯದರ್ಶಿ ರಮೇಶ್, ಉಪಾಧ್ಯಕ್ಷ ನಾಗೇಶ್, ಕ್ರೀಡಾ ಕಾರ್ಯದರ್ಶಿ ಭವಿಷ್, ಮಹೇಶ್, ಚಂದ್ರಶೇಖರ್, ಸುನಿಲ್, ಜೈಸನ್ , ದಿನೇಶ್ ಹಾಗೂ ಮತ್ತಿತರರು ಹಾಜರಿದ್ದರು.