-->


ಮೂಲ್ಕಿ ತಾಲೂಕಿನ ಶಾಲಾಮಕ್ಕಳಿಗೆ ಪುಸ್ತಕ, ಸಾಹಿತ್ಯ ಪರಿಷತ್‌ನಿಂದ ಚಾಲನೆ

ಮೂಲ್ಕಿ ತಾಲೂಕಿನ ಶಾಲಾಮಕ್ಕಳಿಗೆ ಪುಸ್ತಕ, ಸಾಹಿತ್ಯ ಪರಿಷತ್‌ನಿಂದ ಚಾಲನೆ


ಕಿನ್ನಿಗೋಳಿ : ಮೂಲ್ಕಿ ತಾಲೂಕಿನ ಶಾಲೆಗಳ ಮಕ್ಕಳಲ್ಲಿ ಓದುವ ಹವ್ಯಾಸ ಹುಟ್ಟಿಸುವ ಉದ್ದೇಶದಿಂದ ಸಾಹಿತ್ಯ ಪುಸ್ತಕಗಳನ್ನು ವಿತರಿಸುವ ಯೋಜನೆಗೆ ಪದ್ಮನೂರು ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚಾಲನೆ ನೀಡಲಾಯಿತು.
ಕನ್ನಡ ಸಾಹಿತ್ಯ ಸಾಹಿತ್ಯ ಪರಿಷತ್ ಮೂಲ್ಕಿ ತಾಲೂಕು ಅಧ್ಯಕ್ಷ ಮಿಥುನ ಕೊಡೆತ್ತೂರು, ಪದ್ಮನೂರು ಶಾಲೆಯಲ್ಲಿ ಮಕ್ಕಳಿಗೆ ಏರ್ಪಡಿಸಿದ ಸಾಹಿತ್ಯ ಸ್ಪರ್ಧಾ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಿದರು. ಗಾಯಕ ಪ್ರಕಾಶ್ ಆಚಾರ್ ಕನ್ನಡದ ಹಾಡುಗಳನ್ನು ಹಾಡಿದರು. ಕಸಾಪ ಮೂಲ್ಕಿ ಘಟಕದ ಸಂಘಟನಾ ಕಾರ‍್ಯದರ್ಶಿ ಹೆರಿಕ್ ಪಾಯಸ್, ಮುಖ್ಯ ಶಿಕ್ಷಕಿ ಐರಿನ್ ಫೆರ್ನಾಂಡಿಸ್, ಬಯಲಾಟ ಸಮಿತಿಯ ಶೇಖರ ಪೂಜಾರಿ ಮತ್ತಿತರರಿದ್ದರು. ಶಿಕ್ಷಕಿ ಪ್ರಜ್ವಲಾ ಶೆಣೈ ನಿರೂಪಿಸಿದರು. 
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

Advertise under the article