ಕಂಬಳ ಕ್ಷೇತ್ರದ ಸಾಧಕ ನತೇಶ್ ಬಾರಾಡಿ ಹಾಗೂ ನಾದಸ್ವರ ಖ್ಯಾತ ತಾಸೆ ವಾದಕ ಗಣೇಶ್ ಕುಮಾರ್ ರಿಗೆ ಗೌರವ
Friday, June 2, 2023
ಕಟೀಲು:ಶ್ರೀ ಕ್ಷೇತ್ರ ಕೊರಗಜ್ಜ ಮಂತ್ರ ದೇವತಾ ಚಾಮುಂಡೇಶ್ವರಿ ಗುಳಿಗ ಸನ್ನಿಧಿ ಉಲ್ಲಂಜೆ ಇಲ್ಲಿ ವಾರ್ಷಿಕ ನೇಮೋತ್ಸವ ಪ್ರಯುಕ್ತ ಕಂಬಳ ಕ್ಷೇತ್ರದ ಸಾಧಕ ನತೇಶ್ ಬಾರಾಡಿ ಹಾಗೂ ನಾದಸ್ವರ ಖ್ಯಾತ ತಾಸೆ ವಾದಕ ಗಣೇಶ್ ಕುಮಾರ್ ಇವರನ್ನು ಗಣ್ಯರ ಸಮ್ಮುಖದಲ್ಲಿ ಗೌರವಿಸಲಾಯಿತು.ಈ ಸಂದರ್ಭ ಕ್ಷೇತ್ರದ ಧರ್ಮದರ್ಶಿ ಹರೀಶ್ ಪೂಜಾರಿ ,ಅನಿಶ್ ಕುಮಾರ್,ವಸಂತ ಪೂಜಾರಿ, ಉಮಾನಾಥ ಶೆಟ್ಟಿ ಭಂಡಾರ ತೋಟ, ಸತೀಶ್, ನಿಖಿಲ್ , ನಿತಿನ್ ಕುಲಾಲ್, ಗಣೇಶ್ ಕಾರ್ತಿಕ್ ಕೌಶಿ ,ಮನೀಶ್ ಮತ್ತಿತರು ಉಪಸ್ಥಿತರಿದ್ದರು ಪ್ರಕಾಶ್ ಕಿನ್ನಿಗೋಳಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.