ಸುರತ್ಕಲ್ :ದೈವಸ್ಥಾನ ಹಾಗೂ ದೇವಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿ ಡಾ.ಭರತ್ ಶೆಟ್ಟಿ ಅವರ ಭೇಟಿ
Friday, May 5, 2023
ಸುರತ್ಕಲ್ :ಮಹಾ ಶಕ್ತಿಕೇಂದ್ರ ಸುರತ್ಕಲ್ 1 ರ ವ್ಯಾಪ್ತಿಯ ಸುರತ್ಕಲ್ ಪೂರ್ವ 2 ನೇ ವಾರ್ಡಿನಲ್ಲಿ
ಅರಂತ ಬೆಟ್ಟು ಶ್ರೀ ನಾಗದೇವರು ಶ್ರೀ ಉಳ್ಳಾಯ ಪರಿವಾರ ದೈವಗಳ ದೈವಸ್ಥಾನ, ಕಾಟಿಪಳ್ಳ 3ನೇ ವಾರ್ಡಿನ ನಾರಾಯಣ ಗುರು ಮಂದಿರ ಕಾಟಿಪಳ್ಳ, ಶ್ರೀ ಚಾಮುಂಡೇಶ್ವರಿ ದೈವಸ್ಥಾನ ಗಣೇಶ್ ಕಟ್ಟೆ, ಬೊಳ್ಳಾಜೆ ಕುಲಾಲ ಬಂಜನ್ ಕುಟುಂಬಸ್ಥರ ಮೂಲ ತರವಾಡು ಮನೆಗೆ,
ಕೃಷ್ಣಾಪುರ 4 ನೇ ವಾರ್ಡಿನ ಶ್ರೀ ವಿಶ್ವನಾಥ ದೇವಸ್ಥಾನ ಕೃಷ್ಣಾಪುರ ಹಾಗೂ ಹಿರಿಯ ಪ್ರಮುಖ ಮುಖಂಡರ ಮನೆಗೆ ಮಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಭರತ್ ಶೆಟ್ಟಿ ವೈ ಅವರು ಭೇಟಿ ನೀಡಿದರು.
ಈ ಸಂದರ್ಭ ಸ್ಥಳೀಯ ಮ. ನ. ಪಾ ಸದಸ್ಯರು ಸ್ಥಳೀಯ ಬಿಜೆಪಿ ಪ್ರಮುಖರು, ಕಾರ್ಯಕರ್ತರು ಹಾಜರಿದ್ದರು.